ಕರಾವಳಿ

ಕರಾವಳಿ

ನರಿಮೊಗರು ವ್ಯಾಪ್ತಿಯಲ್ಲಿ ಆರೋಗ್ಯ ಕೇಂದ್ರ ಹಾಗೂ ಪಶು ಚಿಕಿತ್ಸಾಲಯ ತೆರೆಯಲು ವೇದನಾಥ ಸುವರ್ಣ ಆಗ್ರಹ

ಪುತ್ತೂರು: ನರಿಮೊಗರು ಗ್ರಾ.ಪಂ ವ್ಯಾಪ್ತಿಯಲ್ಲಿ ಆರೋಗ್ಯ ಕೇಂದ್ರ ತೆರೆಯಬೇಕೆಂದು ಕಾಂಗ್ರೆಸ್ ಮುಖಂಡ ವೇದನಾಥ ಸುವರ್ಣ ಆಗ್ರಹಿಸಿದ್ದಾರೆ.  ಜು.27ರಂದು ನಡೆದ ನರಿಮೊಗರು ಗ್ರಾ.ಪಂ ಗ್ರಾಮ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು ನಮ್ಮ ಹಲವು ವರ್ಷಗಳ ಬೇಡಿಕೆಗಳಲ್ಲೊಂದಾಗಿರುವ ಆರೋಗ್ಯ ಕೇಂದ್ರವನ್ನು ನರಿಮೊಗರು ವ್ಯಾಪ್ತಿಯಲ್ಲಿ ತೆರೆಯಬೇಕು. ನಮ್ಮ ಈ ವರೆಗಿನ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ, ಮುಂದಕ್ಕೆ ನರಿಮೊಗರು ಕೇಂದ್ರ ವ್ಯಾಪ್ತಿಯಲ್ಲಿ ಆರೋಗ್ಯ ಕೇಂದ್ರ ತೆರೆಯಲು ಸಂಬಂಧಪಟ್ಟವರು ಕ್ರಮ ವಹಿಸಬೇಕು, ಮಾತ್ರವಲ್ಲ ಆರೋಗ್ಯ ಸಚಿವರಿಗೂ ಈ ವಿಷಯದ ಬಗ್ಗೆ ಮನವಿ ಕೊಡಬೇಕು ಎಂದು ಅವರು ಆಗ್ರಹಿಸಿದರು. ನರಿಮೊಗರು ವ್ಯಾಪ್ತಿಯಲ್ಲಿ ಪಶು ಚಿಕಿತ್ಸಾಲಯವೂ ಇಲ್ಲ, ಮುಂದಿನ ದಿನಗಳಲ್ಲಿ ಅದೂ ಆಗಬೇಕು. ಸದ್ಯಕ್ಕೆ ದಿನದಲ್ಲಿ ಒಂದು ಹೊತ್ತಾದರೂ ನರಿಮೊಗರು ವ್ಯಾಪ್ತಿಯಲ್ಲಿ ಪಶು ವೈದ್ಯಾಧಿಕಾರಿ ಇರುವಂತೆ ವ್ಯವಸ್ಥೆ ಮಾಡಬೇಕೆಂದು ವೇದನಾಥ ಸುವರ್ಣ ಒತ್ತಾಯಿಸಿದರು.

Read More
ಕರಾವಳಿಜಿಲ್ಲೆ

ಸಂಪ್ಯದ ಉಸ್ಮಾನ್ ಕೊಲೆ ಪ್ರಕರಣ: ಇನ್ನೋರ್ವ ಆರೋಪಿ ಅರೆಸ್ಟ್

2 ವಾರಗಳ ಹಿಂದೆ ಚೆಂಬು ಗ್ರಾಮದ ಕುದ್ರೆಪಾಯದಲ್ಲಿ ಸಹೋದರರಿಂದಲೇ ಕೊಲೆಗೈಯ್ಯಲ್ಪಟ್ಟ ಉಸ್ಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟು ಇನ್ನೊಬ್ಬ ಆರೋಪಿಯನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ. ಉಸ್ಮಾನ್‌ರನ್ನು ಕೊಲೆಗೈಯ್ಯಲು ಅವರ

Read More
ಕರಾವಳಿ

SKSBV ಕುಂಬ್ರ ರೇಂಜ್: ನೂತನ ಪದಾಧಿಕಾರಿಗಳ ಆಯ್ಕೆ

ಪುತ್ತೂರು: ಎಸ್‌ಕೆಎಸ್‌ಬಿವಿ ಕುಂಬ್ರ ರೇಂಜ್ ಇದರ ತಹ್ದೀಸ್ ಸಂಗಮ ಶಂಸುದ್ದೀನ್ ದಾರಿಮಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.ಅತೀಖುರ್ರಹ್ಮಾನ್ ಖುರ್‌ಆನ್ ಪಠಿಸಿದರು. ಸ್ಥಳೀಯ ಖತೀಬ್ ಶುಕೂರ್ ದಾರಿಮಿ ಉದ್ಘಾಟಿಸಿದರು. ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಉಪಾಧ್ಯಕ್ಷ ನಝೀರ್ ಅಝ್ಹರಿ ಬೊಳ್ಮಿನಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಶ್ರಫ್ ರಹ್ಮಾನಿ ವೀರಮಂಗಲರವರು ಮಕ್ಕಳಿಗೆ ತರಬೇತಿ ನೀಡಿದರು. ನಂತರ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಮುಹಮ್ಮದ್ ಸಲ್ಮಾನ್ ಪಾಳ್ಯತ್ತಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಹಫೀಝ್ ತ್ಯಾಗರಾಜೆ, ಕೋಶಾಧಿಕಾರಿಯಾಗಿ ಅತೀಖುರ್ರಹ್ಮಾನ್ ಕೊಳ್ತಿಗೆ, ಸಂಘಟನಾ ಕಾರ್ಯದರ್ಶಿ ಶಮ್ಮಾಸ್ ಮಾಡಾವು ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ಮುಹಮ್ಮದ್ ಮುಬಶ್ಶಿರ್ ಪರ್ಪುಂಜ, ಇರ್ಶಾದ್ ಅಂಙತ್ತಡ್ಕ, ಮುಹಮ್ಮದ್ ಆಬಿದ್ ಕೈಕಂಬ, ಕಾರ್ಯದರ್ಶಿಗಳಾಗಿ ಮುಹಮ್ಮದ್ ಅನ್ಸಿಫ್ ಮುಂಡೋಳೆ, ನಿಝಾರ್ ರೆಂಜಲಾಡಿ, ಅಬ್ದುರ್ರಾಝಿಕ್ ಮಾಡನ್ನೂರ್, ಜಿಲ್ಲಾ ಕೌನ್ಸಿಲರ್‌ಗಳಾಗಿ ಮುಹಮ್ಮದ್ ಅಮ್ಜದ್ ಜಿಸ್ತಿಯಾ, ಮುಹಮ್ಮದ್ ಹುಸೈನ್ ಕಾವು ಆಯ್ಕೆಯಾದರು. ಉಪಸಮಿತಿಗಳಾದ ಅದಬ್, ಟೆಕ್ ಎಡ್ಮಿನ್, ಅಲಿಫ್, ಖಿದ್ಮಾ ಕೋರ್ಡಿನೇಟರ್‌ಗಳಾಗಿ ಶಹಬಾಸ್ ಅಮ್ಚಿನಡ್ಕ, ಜಂಶೀದ್ ಕೂಡುರಸ್ತೆ, ಮಿನಾಝ್ ಸಾರೆಪುಣಿ, ಅಹ್ಮದ್ ರಶೀದ್ ಪಮ್ಮಲೆ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ತಸ್ನೀಂ ಹಸನ್ ಆಯ್ಕೆಯಾದರು. ತೆರವಾದ ಚೇರ್ಮಾನ್ ಸ್ಥಾನಕ್ಕೆ ಅಬ್ದುಲ್ ಬಾಸಿತ್ ಹುದವಿ ಹಾಗೂ ಕನ್ವೀನರಾಗಿ ಇಸ್ಮಾಯಿಲ್ ಕೌಸರಿ ಜಿಸ್ತಿಯಾರನ್ನು ನೇಮಿಸಲಾಯಿತು. ಸಂಗಮದಲ್ಲಿ ಕಾರ್ಯದರ್ಶಿಗಳಾದ ಅಬ್ದುಲ್ ನಾಸಿರ್ ಫೈಝಿ ತ್ಯಾಗರಾಜೆ, ನೌಫಲ್ ರಹ್ಮಾನಿ ಮಾಡಾವು, ಐ.ಟಿ ಕೋರ್ಡಿನೇಟರ್ ನಿಝಾರ್ ಯಮಾನಿ, ಪರೀಕ್ಷಾ ಬೋರ್ಡ್ ಚೇರ್ಮಾನ್ ಅಬ್ದುಲ್ ರಝಾಕ್ ಮುಸ್ಲಿಯಾರ್, ವೈಸ್ ಚೇರ್ಮಾನ್ ಅಬೂಬಕರ್ ಸಿದ್ದೀಕ್ ಫೈಝಿ ಕೊಳ್ತಿಗೆ, ಎಸ್‌ಕೆಎಸ್‌ಬಿವಿ ಕನ್ವೀನರ್ ಸ್ವಾದಿಕ್ ಮುಸ್ಲಿಯಾರ್ ಕಟ್ಟತ್ತಾರ್, ಪರ್ಪುಂಜ ಖತೀಬ್ ಅಶ್ರಫ್ ಮಿಸ್ಬಾಹಿ ಮಡಿಕೇರಿ, ಅಬೂಬಕರ್ ದಾರಿಮಿ ಕಟ್ಟತ್ತಾರ್, ಇಬ್ರಾಹಿಂ ಸಅದಿ ಮಾಡನ್ನೂರ್, ಮೊಹಲ್ಲಾ ಕಾರ್ಯದರ್ಶಿ ಎ. ಕೆ ಮುಹಮ್ಮದ್ ಕಾವು, ಕಾರ್ಯಕಾರಿ ಸಮಿತಿ ಸದಸ್ಯರಾದ ಮಿನಾರ್ ಉಮರ್ ಕಾವು ಮುಂತಾದವರು ಉಪಸ್ಥಿತರಿದ್ದರು. ಚೇರ್‌ಮೆನ್ ಇಸ್ಮಾಯಿಲ್ ಅಸ್ಲಮಿ ಸ್ವಾಗತಿಸಿದರು.

Read More
ಕರಾವಳಿ

ಸೂರಿಕುಮೇರು: ಎಸ್‌ವೈಎಸ್ ನಿಂದ ಅನುಪಯುಕ್ತ ವಸ್ತುಗಳ ಸಂಗ್ರಹ ಕಾರ್ಯಕ್ರಮ

ಮಾಣಿ: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್‌ವೈಎಸ್ ದ.ಕ ಈಸ್ಟ್ ಜಿಲ್ಲಾ ಸಮಿತಿಯ ವತಿಯಿಂದ ನಡೆಯುವ ಅಲ್ ಅರ್ಖಮಿಯ್ಯ ಏಕದಿನ ಕ್ಯಾಂಪ್ ಸಹಾಯಾರ್ಥ “ಸಹಾಯದಿಂದ ಸಮೃದ್ಧಿ”

Read More
ಕರಾವಳಿ

ಸುಳ್ಯದಲ್ಲಿ ಹೆಚ್ಚುತ್ತಿರುವ ಕಳ್ಳರ ಹಾವಳಿ: KSRTC ಬಸ್ ನಿಲ್ದಾಣದ ಪಾರ್ಕಿಂಗ್ ಬಳಿ ದ್ವಿ ಚಕ್ರವಾಹನ ನಿಲ್ಲಿಸಿ ಹೋಗುವವರೇ ಎಚ್ಚರ..!

ಸುಳ್ಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಹೋಗುವವರು ಇನ್ನು ಎಚ್ಚರ ವಹಿಸಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಸುಳ್ಯ ನಗರ ಮತ್ತು ಕಲ್ಲುಗುಂಡಿ, ಜಾಲ್ಸೂರು ಮುಂತಾದ

Read More
ಕರಾವಳಿಜಿಲ್ಲೆ

ಕಡಬ ತಹಶೀಲ್ದಾರ್ ರಮೇಶ್ ಬಾಬು ವರ್ಗಾವಣೆ

ಕಡಬ : ಕಳೆದ ಕೆಲ ವರ್ಷದಿಂದ ಕಡಬ ತಹಶೀಲ್ದಾರ್ ಆಗಿ ಕರ್ತವ್ಯದಲ್ಲಿದ್ದ ರಮೇಶ್ ಬಾಬು ಅವರಿಗೆ ವರ್ಗಾವಣೆಯಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಗೆ ವರ್ಗಾವಣೆಯಾಗಿದೆ.

Read More
ಕರಾವಳಿ

ಸೌಜನ್ಯ ಕೊಲೆಗೆ ನ್ಯಾಯ ಕೇಳಿ ಕೊಳ್ತಿಗೆಯಲ್ಲಿ ಬ್ಯಾನರ್ ಪ್ರತ್ಯಕ್ಷ

ಸೌಜನ್ಯ ಕೊಲೆಗೆ ನ್ಯಾಯ ಕೇಳಿ ಕೊಳ್ತಿಗೆಯಲ್ಲಿ ಬ್ಯಾನರ್ ಅಳವಡಿಸಿರುವುದು ವರದಿಯಾಗಿದೆ. ಕೊಲೆ ನಡೆದು 11 ವರ್ಷ ಕಳೆದರು ನ್ಯಾಯ ಸಿಗದಿರುವುದು, ಪ್ರಭಾವಿಗಳ ಒತ್ತಡ, ಬೆದರಿಕೆಯಿದ್ದರು ಕೂಡಾ ಸೌಜನ್ಯ

Read More
ಕರಾವಳಿ

ಸೌಜನ್ಯ ಕೊಲೆಗೆ ನ್ಯಾಯ ಕೇಳಿ ಸುಳ್ಯದಲ್ಲೂ ಮೊಳಗಿದ ಧ್ವನಿ: ಗುತ್ತಿಗಾರು, ಕೊಲ್ಲಮೊಗ್ರದಲ್ಲಿ ಬ್ಯಾನರ್ ಅಳವಡಿಕೆ

ಸಾವಿರಾರು ಮಂದಿಯನ್ನು ಒಳಗೊಂಡ ವಾಟ್ಸ್ ಆಪ್ ಗ್ರೂಪ್ ರಚನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಸುಳ್ಯ: ಸೌಜನ್ಯ ಕೊಲೆಗೆ ನ್ಯಾಯ ಕೇಳಿ ಸುಳ್ಯ ತಾಲೂಕಿನಲ್ಲಿಯೂ ಸಂಘಟನೆಗೆ ಸಿದ್ಧತೆಗಳು

Read More
ಕರಾವಳಿ

40 ಮಂದಿ ಶಾಸಕರಲ್ಲಿ ಹೇಳಿಯೂ ಪ್ರಯೋಜನವಾಗಿರಲಿಲ್ಲ, ಆದರೆ ನೀವು ಧ್ವನಿ ಎತ್ತಿದ್ದೀರಿ… ಶಾಸಕ ಅಶೋಕ್ ರೈ ಅಭಿನಂದಿಸಿದ ಸೇವಾಭಾರತಿ

ಪುತ್ತೂರು: ಬೆನ್ನುಮೂಲೆ ಮುರಿತಕ್ಕೊಳಗಾಗಿ ಬೆಡ್ ನಲ್ಲೇ ಕಾಲ ಕಳೆಯುತ್ತಿರುವವರ ನೋವನ್ನು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದ್ದೀರಿ, ಇದೇ ವಿಚಾರವನ್ನು ವಿಧಾನಸಭೆಯಲ್ಲಿ ಮಾತನಾಡಿ ಎಂದು ನಮ್ಮ ಸಂಸ್ಥೆಯ ವತಿಯಿಂದ 40

Read More
ಕರಾವಳಿಕ್ರೈಂ

ಪುತ್ತೂರು: ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆ

ಪುತ್ತೂರು: ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪೊದೆಯೊಂದರ ಬಳಿ ಪತ್ತೆಯಾದ ಘಟನೆ ಪುತ್ತೂರು ಪಾಂಗ್ಲಾಯಿಯಲ್ಲಿ ಜು.27ರಂದು ನಡೆದಿದೆ. ಪೊಲೀಸರು ಮೃತದೇಹವನ್ನು ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಮೃತದೇಹ

Read More
error: Content is protected !!