ಕರಾವಳಿ

ಬೆಳ್ತಂಗಡಿ:
ಕಾಲು ಜಾರಿ ಕೆರೆಗೆ ಬಿದ್ದು ವೃದ್ದ ಮೃತ್ಯು :ಠಾಣೆಯಲ್ಲಿ ಪ್ರಕರಣ ದಾಖಲು



ವೃದ್ಧರೋರ್ವರು ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಅಕ್ಟೋಬರ್ 13 ರಂದು ನಡೆದಿದ್ದು ನಿನ್ನೆ ಬೆಳಿಗ್ಗೆ ಶವ ಪತ್ತೆಯಾದ ಘಟನೆ ಬೆಳ್ತಂಗಡಿಯ ಉಜಿರೆಯಲ್ಲಿ ನಡೆದಿದೆ.
ಉಜಿರೆ ಅತ್ತಾಜೆ ನಿವಾಸಿ ಗೋಪಾಲನಾಯ್ಕ (60) ಮೃತ ದುರ್ದೈವಿ.


ರಾತ್ರಿಯಾದರೂ ಮನೆಗೆ ಬಾರದೇ ಇದ್ದುದನ್ನು ಕಂಡು ಸ್ಥಳೀಯರಲ್ಲಿ ಮನೆಯವರು ವಿಚಾರಿಸಿದ್ದಾರೆ.
ಆದರೆ ಮನೆಯವರಿಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಸ್ಥಳೀಯರೋರ್ವರು ಎಂದಿನಂತೆ ವಾಕಿಂಗ್ ಹೋಗಿದ್ದ ವೇಳೆ ಉಜಿರೆ ಮುಖ್ಯ ರಸ್ತೆಯಲ್ಲಿ ಮೃತರ ಚಪ್ಪಲಿಯನ್ನು ಕಂಡು ಹುಡುಕಾಟ ನಡೆಸಿದ್ದಾರೆ.


ಅಲ್ಲೇ ದೂರದ ಕೆರೆಯಲ್ಲಿ ಶವ ಪತ್ತೆಯಾಗಿರುವುದು ಕಂಡು ಬಂದಿದೆ. ಶವವನ್ನು ಮೇಲಕ್ಕೆತ್ತಿ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಶವವನ್ನು ಇಡಲಾಗಿದೆ. ಮೃತರು ಪತ್ನಿ ದೇವಕಿ, ಇಬ್ಬರು ಗಂಡು ಮಕ್ಕಳಾದ ರವಿ, ರಾಜೇಶ್, ಸೊಸೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!