ಕರಾವಳಿರಾಜಕೀಯ

ಕೈ ಪಾಳಯದಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆಯೇ ಶಕುಂತಳಾ ಶೆಟ್ಟಿ…!!?
ಕಾರ್ಯಕರ್ತರಲ್ಲಿ ಉದ್ಭವಗೊಂಡ ಆತಂಕ.. ಅನುಮಾನ…!!!




ಪುತ್ತೂರು; ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಂಘಪರಿವಾರದ ವಿವಾದಿತ ಪುರೋಹಿತರಿಂದ ಆಯುಧ ಪೂಜೆ ಮಾಡಿಸಿದ ಬಳಿಕ ಕಾಂಗ್ರೆಸ್ ವಲಯದಲ್ಲಿ ತಳಮಳ ಉಂಟಾಗಿದ್ದು ಪೂಜೆ ಮಾಡಿಸಿದವರ ವಿರುದ್ದ ಕಾರ್ಯಕರ್ತರು ಆಕ್ರೋಶಗೊಂಡ ಬಳಿಕ ಪೂಜೆಯಲ್ಲಿ ಭಾಗವಹಿಸಿದ್ದ ಮಾಜಿ ಶಾಸಕಿ ಕಾಂಗ್ರೆಸ್ ಮುಖಂಡೆ ಶಕುಂತಳಾ ಶೆಟ್ಟಿ ಯಾರ ಕೈಗೂ ಸಿಗದೆ, ಯಾರ ಸಂಪಕಕ್ಕೂ ಸಿಗದೆ ಇರುವುದು ಕೈ ಕಾರ್ಯಕರ್ತರಲ್ಲಿ ಆತಂಕ ಮತ್ತು ಅನುಮಾನವನ್ನು ಸೃಷ್ಟಿಸಿದೆ ಎನ್ನಲಾಗಿದೆ.


ಆಯುಧ ಪೂಜಾ ವಿವಾದದ ಬಳಿಕ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಬ್ಲಾಕ್ ಸಭೆಗೂ ಗೈರಾಗಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿದ ಬ್ಲಾಕ್ ಪದಾಧಿಕಾರಿಗಳು ಅವರು ಗೋವಾ ಟೂರ್‌ನಲ್ಲಿದ್ದಾರೆ ಎಂದು ಹೇಳಿದ್ದರು. ಆದರೆ ಆ ಬಳಿಕ ತಾನು ಗುಜರಾತ್ ಪ್ರವಾದಲ್ಲಿರುವುದಾಗಿ ಶಕುಂತಳಾ ಶೆಟ್ಟಿ ತನ್ನ ಫೇಸ್ ಬುಕ್ ಪೇಜಿನಲ್ಲಿ ಚಿತ್ರವನ್ನು ಶೇರ್ ಮಾಡಿದ್ದರು. ಚಿತ್ರವನ್ನು ಶೇರ್ ಮಡಿದ ಬಗ್ಗೆ ಕಾರ್ಯಕರ್ತರಲ್ಲಿ ಆಕ್ರೋಶ ಉಂಟಾಗಿತ್ತು. ರಾಹುಲ್ ಗಾಂದಿಯವರು ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿರುವಾಗ ಮಾಜಿ ಶಾಸಕಿ ಗುಜರಾತ್ ಪ್ರವಾಸದಲ್ಲಿರುವುದು ಎಷ್ಟು ಸರಿ ಎಂಬ ಒಕ್ಕರಣೆ ಬರುತ್ತಿದ್ದಂತೆಯೇ ಫೇಸ್ ಬುಕ್ ಪೇಜಿನಿಂದ ಫೋಟೋ ಡಿಲಿಟ್ ಮಾಡಲಾಗಿದೆ.

ಶಕುಂತಳಾ ಶೆಟ್ಟಿಯವರು ತನ್ನ ಫೇಸ್ ಬುಕ್ ಪೇಜಿನಲ್ಲಿ ಗುಜರಾತ್ ಪ್ರವಾಸದ ನೆನಪುಗಳು ಎಂದು ಬರೆದಿದ್ದು ಅದು ಹಳೆಯ ಫೋಟೋ ಎಂಬ ಮಾತುಗಳೂ ಕೇಳಿ ಬರುತ್ತಿದೆ. ಶಕುಂತಳಾ ಶೆಟ್ಟಿಯವರು ಕಾರ್ಯಕರ್ತರಿಗೆ ಸಿಗದೇ ಇರುವುದು ಮತ್ತು ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಬಾರದೇ ಇರುವುದು ಕಾರ್ಯಕರ್ತರಲ್ಲಿ ಆತಂಕವನ್ನು ಸೃಷ್ಟಿಸುವುದರ ಜೊತೆ ಅನುಮಾನವನ್ನು ಹುಟ್ಟು ಹಾಕಿದೆ ಇದಕ್ಕೆ ಶಕು ಅಕ್ಕವರೇ ಉತ್ತರವನ್ನು ಕೊಟ್ಟರೆ ಎಲ್ಲಾ ಗೊಂದಲಗಳಿಗೂ ಪರಿಹಾರ ದೊರೆಯಲಿದೆ.

Leave a Reply

Your email address will not be published. Required fields are marked *

error: Content is protected !!