ಸುಬ್ರಹ್ಮಣ್ಯ: ರಥಬೀದಿಯಲ್ಲಿ ಹೆಚ್ಚಿದ ಬೀದಿ ನಾಯಿಗಳ ಕಾಟ ಭಕ್ತಾದಿಗೆ ಕಚ್ಚಿದ ಬೀದಿ ನಾಯಿ
ಸುಳ್ಯ: ಕುಕ್ಜೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಯಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು ಭಕ್ತಾದಿಗಳಿಗೆ, ವಾಹನ ಸವಾರರಿಗೆ ತೊಂದರೆ ಉಂಟಾಗಿದದೆ. ಇಂದು ಬೆಳಗ್ಗೆ ದೇವಸ್ಥಾನಕ್ಕೆ ಬಂದಿದ್ದ ಭಕ್ತರೊರ್ವರಿಗೆ ಬೀದಿನಾಯಿ ಕಚ್ಚಿದ ಘಟನೆ ವರದಿಯಾಗಿದೆ.
ಈ ಸಂದರ್ಭದಲ್ಲಿ ನಾಯಿ ಕಡಿತದಿಂದ ಗಾಯಗೊಂಡವರನ್ನು ಸಮಾಜಸೇವಕ ರವಿಕಕ್ಕೆಪದವು ಮತ್ತಿತರರು ಸೇರಿ ಕಡಬದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬೀದಿ ನಾಯಿಗಳ ತೊಂದರೆ ಬಗ್ಗೆ ಹಲವು ಭಾರಿ ಸುಬ್ರಹ್ಮಣ್ಯ ಗ್ರಾ.ಪಂ ಸಭೆಯಲ್ಲಿ ಹಾಗೂ ದೇವಸ್ಥಾನಕ್ಕೆ ಸಂಬಂಧಿಸಿದ ಸಭೆಯಲ್ಲಿ ಚರ್ಚೆಗೆ ಬಂದಿತ್ತಾದರೂ ಯಾರೋಬ್ಬರು ಇದರ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಲ್ಲದೆ ಸುಬ್ರಹ್ಮಣ್ಯ ಸರ್ಕಾರಿ ಆಸ್ಪತ್ರೆಯಲ್ಲೂ 24×7 ಸೇವೆಗಳಿಲ್ಲದೆ ತುರ್ತು ಸಂದರ್ಭದಲ್ಲಿ ದೂರದ ಕಡಬ ಕ್ಕೆ ತೆರಳಬೇಕಾಗಿದ್ದು ಇದರಿಂದ ಭಾರಿ ತೊಂದರೆ ಉಂಟಾಗಿದೆ.