ಕ್ರೈಂ

ಕರಾವಳಿಕ್ರೈಂ

ಉಳ್ಳಾಲ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೈದ್ಯೆ ಜೊತೆ ಅಸಭ್ಯ ವರ್ತನೆ ಆರೋಪ: ಬಸ್ ಕ್ಲೀನರ್ ಬಂಧನ

ಉಳ್ಳಾಲ: ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ಬಸ್ ಕ್ಲೀನರ್ ಒಬ್ಬನನ್ನು ಉಳ್ಳಾಲ ಠಾಣಾ ಪೊಲೀಸರು

Read More
ಕರಾವಳಿಕ್ರೈಂ

ವಿಟ್ಲ: ಅಬ್ದುಲ್ ಸಮದ್ ಕೊಲೆ ಪ್ರಕರಣ-ಆರೋಪಿಗೆ ಪೊಲೀಸ್ ಕಸ್ಟಡಿ

ಬಂಟ್ವಾಳ: ಸುರಿಬೈಲು ನಿವಾಸಿ ಸುಲೈಮಾನ್ ಎಂಬವರ ಪುತ್ರ 19 ವರ್ಷ ಪ್ರಾಯದ ಅಬ್ದುಲ್ ಸಮದ್ ಅವರನ್ನು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಬೋಳಂತೂರು ನಿವಾಸಿ ಅದ್ದು ಯಾನೆ ಅದ್ರಾಮನನ್ನು ಹೆಚ್ಚಿನ ವಿಚಾರಣೆಗಾಗಿ ಐದು ದಿನಗಳ ಅವಧಿಗೆ ಪೊಲೀಸರ ಕಸ್ಟಡಿಗೆ ನೀಡಿ ನ್ಯಾಯಾಲದ ಆದೇಶ ಮಾಡಿದೆ. ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿರುವ ಅಬ್ದುಲ್ ಸಮದ್ ಮೃತದೇಹವನ್ನು ಮನೆಯವರಿಗೆ ಹಸ್ತಾಂತರಿಸಲಾಗಿದೆ. ಅದ್ರಾಮ ಹಾಗೂ ಅಬ್ದುಲ್ ಸಮದ್ ಇಬ್ಬರೂ ಪರಿಚಿತರಾಗಿದ್ದು ಇತ್ತೀಚೆಗಷ್ಟೇ ಬೆಂಗಳೂರಿಗೆ ಉದ್ಯೋಗಕ್ಕೆಂದು ತೆರಳಿದ್ದ ಅಬ್ದುಲ್ ಸಮದ್‌ನನ್ನು ಊರಿಗೆ ಬರುವಂತೆ ಅದ್ರಾಮ ಪದೇ ಪದೇ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಅದರಂತೆ ನ.1ರಂದು ಊರಿಗೆ ಬಂದಿದ್ದ ಸಮದ್‌ನನ್ನು ಅದ್ರಾಮ ಅವರು ತಾನಿರುವಲ್ಲಿಗೆ ಕರೆಸಿಕೊಂಡಿದ್ದು ಬಳಿಕ ತನ್ನ ರಿಕ್ಷಾದಲ್ಲಿ ಇರಾ ಗುಡ್ಡವೊಂದಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲಿ ಕೆಲ ಹೊತ್ತು ವಿಶ್ರಾಂತಿ ಪಡೆದಿದ್ದ ಅವರಿಬ್ಬರ ಮಧ್ಯೆ ಅದ್ಯಾವುದೋ ವಿಚಾರಕ್ಕೆ ಗಲಾಟೆ ಆಗಿದೆ ಎನ್ನಲಾಗಿದೆ. ಸಮದ್ ಬೆಂಗಳೂರಿಗೆ ಹೋಗುವ ವಿಚಾರದಲ್ಲಿ ಇಬ್ಬರೊಳಗೆ ಚರ್ಚೆ ನಡೆದು ಅದು ವಿಕೋಪಕ್ಕೆ ಹೋಗಿತ್ತು ಎನ್ನುವ ಮಾತುಗಳೂ ಕೇಳಿ ಬಂದಿದೆ. ಇದೇ ವಿಚಾರವಾಗಿ ಸಮದ್‌ನನ್ನು ಕೊಲೆ ಮಾಡಿರುವ ಅದ್ರಾಮ ಬಳಿಕ ಸೀಮೆ ಎಣ್ಣೆಯನ್ನು ಸಮದ್ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಮದ್‌ನನ್ನು ಕೊಲೆ ಮಾಡಿದ ಬಳಿಕ ತನ್ನ ರಿಕ್ಷಾದಲ್ಲಿ ಗುಡ್ಡದಿಂದ ಹಿಂತಿರುಗಿದ್ದ ಅದ್ರಾಮ ಕೊಲೆ ವಿಚಾರ ಬೆಳಕಿಗೆ ಬರುವುದು ಬೇಡ ಎನ್ನುವ ನಿಟ್ಟಿನಲ್ಲಿ ಸಮದ್ ಮೃತದೇಹವನ್ನು ಗುಂಡಿಗೆ ಹಾಕಿ ಮುಚ್ಚುವ ಪ್ಲಾನ್ ಮಾಡಿಕೊಂಡಿದ್ದ. ಅದಕ್ಕಾಗಿ ತನ್ನ ಸಂಬಂಧಿಕನಾಗಿರುವ ಕೊಕ್ಕೆಪುಣಿಯ ಸೆಲೀಂ ಎಂಬವರಿಗೆ ವಿಚಾರ ತಿಳಿಸಿ ಸಹಕರಿಸುವಂತೆ ಕೇಳಿಕೊಂಡಿದ್ದ. ಇದಕ್ಕೆ ಒಪ್ಪದ ಸೆಲೀಂ ಅವರು ವಿಚಾರವನ್ನು ಪೊಲೀಸರ ಗಮನಕ್ಕೆ ತಂದ ಬಳಿಕ ಇಡೀ ಪ್ರಕರಣ ಬೆಳಕಿಗೆ ಬಂದಿರುವುದಾಗಿ ತಿಳಿದು ಬಂದಿದೆ. ಆರೋಪಿ ಅದ್ರಾಮ ಯಾವ ಕಾರಣಕ್ಕಾಗಿ ಅಬ್ದುಲ್ ಸಮದ್‌ನನ್ನು ಕೊಲೆ ಮಾಡಿದ್ದಾನೆ..? ಗುಡ್ಡದಲ್ಲಿ ಅವರೊಳಗೆ ನಿಜವಾಗಿಯೂ ನಡೆದದ್ದೇನು..? ಕೊಲೆಯ ಹಿಂದೆ ಯಾವೆಲ್ಲಾ ನಿಗೂಢತೆಗಳಿವೆ ಎನ್ನುವ ಸ್ಪಷ್ಟ ವಿಚಾರ ಪೊಲೀಸ್ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.

Read More
ಕರಾವಳಿಕ್ರೈಂ

ವಿಟ್ಲ: ಪೆಟ್ರೋಲ್ ಸುರಿದು ಯುವಕನ ಕೊಲೆ: ಆಟೋ ಚಾಲಕ ಬಂಧನ

ವಿಟ್ಲ: ಯುವಕನೋರ್ವನನ್ನು ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಟ್ಟು ಹಾಕಿರುವ ಘಟನೆ ಬೆಳಕಿಗೆ ಬಂದಿದ್ದು ಪ್ರಕರಣಕ್ಕೆ ಸಂಬಂಧಿಸಿ ಆಟೋ ಚಾಲಕನೋರ್ವನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬೊಳಂತರೂ

Read More
ಕ್ರೈಂ

29 ವಿಷಕಾರಿ ಹಾವುಗಳೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬಂಧನ

29 ವಿಷಕಾರಿ ಹಾವುಗಳೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರನ್ನು ಟಾಟಾನಗರ ರೈಲು ನಿಲ್ದಾಣದಲ್ಲಿ ರೈಲ್ವೆ ರಕ್ಷಣಾ ಪಡೆ ವಶಕ್ಕೆ ಪಡೆದಿದ್ದು, ಆಕೆಯ ಬಳಿಯಿದ್ದ ವಿಷಕಾರಿ ಹಾವುಗಳು, ಹಲ್ಲಿಗಳು ಮತ್ತು

Read More
ಕ್ರೈಂ

ಪೇರಲೆ ಹಣ್ಣು ಕಿತ್ತು ತಿಂದನೆಂದು ದಲಿತ ಯುವಕನ ಬರ್ಬರ ಕೊಲೆ

ಲಖನೌ: ಪೇರಲೆ ಹಣ್ಣು ಕಿತ್ತು ತಿಂದನೆಂದು 20 ವರ್ಷದ ಪರಿಶಿಷ್ಟ ಜಾತಿಯ ಯುವಕನನ್ನು ಹೊಡೆದು ಕೊಂದಿರುವ ಆಘಾತಕಾರಿ ಉತ್ತರ ಪ್ರದೇಶದ ಆಲಿಗಢ ಜಿಲ್ಲೆಯಲ್ಲಿ ವರದಿಯಾಗಿದೆ. ಮೃತ ಯುವಕನನ್ನು

Read More
ಕ್ರೈಂ

ಪಿಯು ವಿದ್ಯಾರ್ಥಿಯ ಮೇಲೆ ದ್ವೇಷ: ಶಾಲೆಗೆ ಲೋಡೆಡ್ ಪಿಸ್ತೂಲ್ ತಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ!

10ನೇ ತರಗತಿ ವಿದ್ಯಾರ್ಥಿಯೊಬ್ಬ ಪಿಸ್ತೂಲ್‌ನೊಂದಿಗೆ ಶಾಲೆಗೆ ಬಂದ ಘಟನೆ ಹರಿದ್ವಾರದಲ್ಲಿ ನಡೆದಿದೆ. ಕೆಲ ದಿನಗಳ ಹಿಂದೆ ಅದೇ ಶಾಲೆಯ 12ನೇ ತರಗತಿ ವಿದ್ಯಾರ್ಥಿಯೊಂದಿಗೆ ಜಗಳ ಮಾಡಿಕೊಂಡಿದ್ದ. ನಂತರ

Read More
ಕ್ರೈಂರಾಜ್ಯ

ಕೊಲೆ ಪ್ರಕರಣ: ಬಾಲಕನನ್ನು ಬಿಹಾರದಲ್ಲಿ ಬಂಧಿಸಿದ ಪೊಲೀಸರು

ಬೆಂಗಳೂರು: ಪರಿಚಿತನ ತಲೆಗೆ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪದಲ್ಲಿ ಬಾಲಕನನ್ನ ಕೆ.ಎಸ್.ಲೇಔಟ್ ಠಾಣೆ ಪೊಲೀಸರು ಬಿಹಾರದಲ್ಲಿ ಬಂಧಿಸಿದ್ದಾರೆ. 2022ರ ಅ.21ರಂದು ರಾತ್ರಿ ಕೆ ಎಸ್

Read More
ಕ್ರೈಂರಾಜ್ಯ

ಶಿವಮೊಗ್ಗ: ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು

ಶಿವಮೊಗ್ಗ: ಪ್ರಕರಣವೊಂದರ ಆರೋಪಿಯನ್ನು ಬಂಧಿಸಲು ತೆರಳಿದ್ದ ವೇಳೆ ಆತ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದ್ದು, ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು

Read More
ಕರಾವಳಿಕ್ರೈಂ

ವಿಟ್ಲ: ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರ ಆರೋಪ – ಎರಡು ಪ್ರತ್ಯೇಕ ಪ್ರಕರಣ ದಾಖಲು – ಮೂವರ ಬಂಧನ

ವಿಟ್ಲ: ಕೊಳ್ನಾಡು ಗ್ರಾಮದ ಅಪ್ರಾಪ್ತ ಬಾಲಕಿಯನ್ನುಬಾಲಕಿಯನ್ನು ಅಪಹರಣ ಮಾಡಿ ಅತ್ಯಾಚಾರವೆಸಗಿದ ಆರೋಪದ ಮೇಲೆ ವಿಟ್ಲ ಠಾಣಾ ಪೊಲಿಸರು ಪೋಕ್ಸೋ ಕಾಯ್ದೆಯಡಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಓರ್ವ

Read More
ಕ್ರೈಂ

ಎರಡು ಮಕ್ಕಳನ್ನು ಕೊಂದು ತಾಯಿ ನೇಣು ಬಿಗಿದು ಆತ್ಮಹತ್ಯೆ

ಮಲಪ್ಪುರಂ: ಚಿಕ್ಕ ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸ್ಥಳೀಯರಿಗೆ ಆಘಾತ ತಂದಿದೆ. ಪತಿ ಮಲಗಿದ್ದಾಗ ಮಕ್ಕಳನ್ನು ಕೊಂದು ತಾಯಿ ನೇಣು ಬಿಗಿದುಕೊಂಡಿದ್ದಾಳೆ. ಕೊಟ್ಟಕಲ್ ಚೆಟ್ಟಿಯಂಕಿನಾರ್

Read More
error: Content is protected !!