ಕರಾವಳಿ

ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ವರ್ಗಾವಣೆ ಆದೇಶ ರದ್ದು



ಸುಳ್ಯದ ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದು, ಕೆಲವು ದಿನಗಳ ಹಿಂದೆ ಉಡುಪಿಗೆ ವರ್ಗಾವಣೆ ಆದೇಶ ಪಡೆದಿದ್ದ ನವೀನ್ ಚಂದ್ರ ಜೋಗಿಯವರ ವರ್ಗಾವಣೆ ರದ್ದು ಗೊಳಿಸಿರುವುದಾಗಿ ತಿಳಿದು ಬಂದಿದೆ.

ರಾಜ್ಯದಲ್ಲಿ ಹಲವು ವೃತ್ತ ನಿರೀಕ್ಷರನ್ನು ವರ್ಗಾವಣೆಗೊಳಿಸಿ ಹೊಸ ಆದೇಶ ಪಟ್ಟಿ ಬಿಡುಗಡೆಗೊಂಡಿದ್ದು, ಇದರಲ್ಲಿ ಈ ಹಿಂದೆ ವರ್ಗಾವಣೆಗೊಳಿಸಿದ ಕೆಲವರ ವರ್ಗಾವಣೆಯನ್ನು ರದ್ದು ಪಡಿಸಿ ಹೊಸ ಆದೇಶವಿದೆ.

ನವೀನ್ ಚಂದ್ರ ಜೋಗಿಯವರನ್ನು ಉಡುಪಿ ಸಿ.ಇ.ಎನ್. ಪೊಲೀಸ್ ಠಾಣೆಗೆ ವರ್ಗಾಯಿಸಿರುವ ಆದೇಶವನ್ನು ರದ್ದು ಪಡಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!