ಕರಾವಳಿ

ಕೋಟೆಕಾರ್ 8 ನೇ ವಾರ್ಡ್ ನ ಕೆ.ಪಿ ಹಿತ್ತಿಲುನಲ್ಲಿ ಕಾಂಕ್ರೀಟ್ ರಸ್ತೆ ಉದ್ಘಾಟನೆ



ಕೋಟೆಕಾರ್ ಪಟ್ಟಣ ಪಂಚಾಯಿತ್ 15 ನೇ ಹಣಕಾಸು ಯೋಜನೆಯಲ್ಲಿ ಶಾಸಕ ಯು.ಟಿ ಖಾದರ್ ರವರ ಶಿಫಾರಸು ಮೇರೆಗೆ ಮಂಜೂರಾದ ಅನುದಾನದಲ್ಲಿ ಕೋಟೆಕಾರ್ 8 ನೇ ವಾರ್ಡ್ ನ ಕೆ.ಪಿ ಹಿತ್ತಿಲು ಎಂಬಲ್ಲಿ ಕಾಂಕ್ರಿಟೀಕರಣವಾದ ರಸ್ತೆಯನ್ನು ಸ್ಥಳೀಯ ಕೌನ್ಸಿಲರ್ ಅಹಮದ್ ಇಸಾಕ್ ರವರ ಉಪಸ್ಥಿತಿಯಲ್ಲಿ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಸುಲ್ಯೆಮಾನ್ ಹಾಜಿ ಮತ್ತು ಕೊಂಡಾಣ ದೇವಸ್ಥಾನದ ಮಾಜಿ ಅಧ್ಯಕ್ಷರಾದ ಜೀವಾನಂದ ಶೆಟ್ಟಿ ಕ್ರಮವಾಗಿ ರಿಬ್ಬನ್ ಕಟ್ ಮತ್ತು ತೆಂಗಿನ ಕಾಯಿ ಒಡೆಯುವುದರ ಮೂಲಕ ಉದ್ಘಾಟಿಸಿದರು.

ಊರಿನ ಗಣ್ಯರಾದ ಇಬ್ರಾಹಿಂ ಕೆ.ಪಿ ಅಬ್ಬಾಸ್ ಎಚ್.ಐ,ಯಶವಂತ, ಪುರುಷೋತ್ತಮ ಮದ್ವಾಳ್,ಹಂಝ ಕೋಟೆಕಾರ್, ಸುಭಾಶ್ ಶೆಟ್ಟಿ, ಇಬ್ರಾಹಿಂ ಎಚ್, ಮೊದಲಾದವರು ಉಪಸ್ಥಿತರಿದ್ದರು. ಅಹಮದ್ ಅಜ್ಜಿನಡ್ಟ ಸ್ವಾಗತಿಸಿದರು. ದೇವದಾಸ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!