ಸೂರ್ಯಗ್ರಹಣ ಹಿನ್ನಲೆ: ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ದೇವಸ್ಥಾನದಲ್ಲಿ ದರ್ಶನಕ್ಕೆ ನಿರ್ಬಂಧ
ಸುಬ್ರಹ್ಮಣ್ಯ: ಈ ವರ್ಷದ ಕೊನೆಯ ಗ್ರಹಣವಾದ ಸೂರ್ಯಗ್ರಹಣ ಅ.25ರಂದು ಇರುವುದರಿಂದ ದ.ಕನ್ನಡದ ಪುಣ್ಯ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳದಲ್ಲಿ ಅನ್ನದಾನ ಸೇರಿದಂತೆ ಯಾವುದೇ ಸೇವೆಗಳು ಜರಗುವುದಿಲ್ಲ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
![](http://newsbites.in/wp-content/uploads/2022/10/IMG-20221020-WA0067.jpg)
ಅ. 25ರಂದು ಮಧ್ಯಾಹ್ನ 2.30ರಿಂದ ರಾತ್ರಿ 7.30ರವರೆಗೆ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿದುಬಂದಿದೆ.
ಮರುದಿನ ಬೆಳಿಗ್ಗೆ ಕೂಡಾ ದೇವರ ನಿತ್ಯದ ಪೂಜೆಯ ಸಮಯದಲ್ಲಿ ಕೂಡಾ ವ್ಯತ್ಯಾಸವಾಗುವುದರಿಂದ ಬೆಳಿಗ್ಗೆ 9ಗಂಟೆಗೆ ಸರಿಯಾಗಿ ಭಕ್ತರಿಗೆ ದೇವರ ದರ್ಶನ ಪಡೆಯಬಹುದು.