ಜಿಲ್ಲೆರಾಜ್ಯ

ಸೂರ್ಯಗ್ರಹಣ ಹಿನ್ನಲೆ: ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ದೇವಸ್ಥಾನದಲ್ಲಿ ದರ್ಶನಕ್ಕೆ ನಿರ್ಬಂಧ



ಸುಬ್ರಹ್ಮಣ್ಯ: ಈ ವರ್ಷದ ಕೊನೆಯ ಗ್ರಹಣವಾದ ಸೂರ್ಯಗ್ರಹಣ ಅ.25ರಂದು ಇರುವುದರಿಂದ ದ.ಕನ್ನಡದ ಪುಣ್ಯ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳದಲ್ಲಿ ಅನ್ನದಾನ ಸೇರಿದಂತೆ ಯಾವುದೇ ಸೇವೆಗಳು ಜರಗುವುದಿಲ್ಲ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ಅ. 25ರಂದು ಮಧ್ಯಾಹ್ನ 2.30ರಿಂದ ರಾತ್ರಿ 7.30ರವರೆಗೆ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿದುಬಂದಿದೆ.
ಮರುದಿನ ಬೆಳಿಗ್ಗೆ ಕೂಡಾ ದೇವರ ನಿತ್ಯದ ಪೂಜೆಯ ಸಮಯದಲ್ಲಿ ಕೂಡಾ ವ್ಯತ್ಯಾಸವಾಗುವುದರಿಂದ ಬೆಳಿಗ್ಗೆ 9ಗಂಟೆಗೆ ಸರಿಯಾಗಿ ಭಕ್ತರಿಗೆ ದೇವರ ದರ್ಶನ ಪಡೆಯಬಹುದು.

Leave a Reply

Your email address will not be published. Required fields are marked *

error: Content is protected !!