ಸಯ್ಯದ್ ಶರಫುದ್ದೀನ್ ತಂಙಳ್ ಸಾಲ್ಮರ ನಿಧನ
ಪುತ್ತೂರು: ಧಾರ್ಮಿಕ ಪಂಡಿತ ಸಯ್ಯದ್ ಶರಫುದ್ದೀನ್ ತಂಙಳ್ ಸಾಲ್ಮರ ಎ.27ರಂದು ತಡರಾತ್ರಿ ಹೃದಯಾಘಾತದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ದಿ.ಹಸನ್ ಕೋಯ ತಂಜಳ್ ಅವರ ಪುತ್ರರಾಗಿರುವ ಶರಫುದ್ದೀನ್ ತಂಜಳ್ ಪತ್ನಿ ಹಾಗೂ ಪುತ್ರ ಸಯ್ಯದ್ ಅಲ್ ಹಾದಿ ಹಸನುಲ್ ಅಶ್ವರಿ ತಂಜಳ್ ಸೇರಿದಂತೆ ಸಹೋದರರಾದ ಸಯ್ಯದ್ ಅಲ್ ಹಾದಿ ಇಬ್ರಾಹೀಂ ತಂಜಳ್ ಆತೂರು ಮತ್ತು ಪೋಳ್ಯ ಜುಮಾ ಮಸೀದಿಯ ಖತೀಬರಾಗಿರುವ ಸಯ್ಯದ್ ಅಲ್ ಹಾದಿ ಯಹ್ಯಾ ತಂಜಳ್, ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಶರಫುದ್ದೀನ್ ತಂಙಳ್ ನಿಧನಕ್ಕೆ ಹಲವು ಧಾರ್ಮಿಕ ಸಾಮಾಜಿಕ ಹಾಗೂ ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ




