ಕರಾವಳಿ

ಬಂಟ್ವಾಳದಲ್ಲಿ ರಸ್ತೆಯಲ್ಲಿ ಪ್ರಚೋಧನಕಾರಿ ಬರಹ
ಬಿಜೆಪಿ , ಸಂಘ ಪರಿವಾರ ಕೈವಾಡವಿದೆ- ತನಿಖೆ ನಡೆಸಿ; ಪುತ್ತೂರು ಬ್ಲಾಕ್ ಅಧ್ಯಕ್ಷ




ಪುತ್ತೂರು: ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ನೈನಾಡು ಎಂಬಲ್ಲಿ ರಸ್ತೆಯ ಮೇಲೆ ಪ್ರಚೋಧನಕಾರಿ ಬರಹ ಕಂಡು ಬಂದಿದ್ದು ಇದರ ಹಿಂದೆ ಬಿಜೆಪಿ ಮತ್ತು ಸಂಘ ಪರಿವಾರ ಕೈವಾಡ ಇದ್ದು ಸೂಕ್ತ ತನಿಖೆ ನಡೆಸಿ ಬರೆದವರನ್ನು ಪತ್ತೆ ಮಾಡಬೇಕು ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಆಗ್ರಹಿಸಿದ್ದಾರೆ.


ಹೊನ್ನಾವರದ ಪರೇಶ್ ಮೇಸ್ತಾ ಹತ್ಯೆಯನ್ನು ಒಂದು ಸಮುದಾಯದ ವಿರುದ್ದ ಆರೋಪ ಮಾಡಿ ಅಂದು ಅಲ್ಲಲ್ಲಿ ಪ್ರತಿಭಟನೆ ನಡೆಸಿದ್ದರು. ಆದರೆ ಸಿಬಿಐ ತನಿಖೆಯಲ್ಲಿ ಮೇಸ್ತಾ ಸಾವು ಆಕಸ್ಮಿಕ ಎಂದು ಬಿ ರಿಪೋರ್ಟು ಸಲ್ಲಿಸಿದೆ. ಅಂದು ಅವರು ಮಾಡಿದ ಆರೋಪಕ್ಕೆ ಇಂದು ಕ್ಷಮೆ ಕೇಳಬೇಕು. ಸಂಘಪರಿವಾರ ಅಧಿಕಾರದ ಆಸೆಗಾಗಿ ಏನು ಬೇಕಾದರೂ ಮಾಡಲು ಸಿದ್ದವಿದೆ. ಬಂಟ್ವಾಳದಲ್ಲಿ ಕಂಡು ಬಂದ ಬರಹದಲ್ಲೂ ಅವರದ್ದೇ ಕೈವಾಡ ಬಲವಾಗಿದ್ದು ಇದ್ದು ಪೊಲೀಸರು ನ್ಯಾಯೋಚಿತ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸುವ ಕೆಲಸವನ್ನು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!