ಕರಾವಳಿಜಿಲ್ಲೆ

ಸುಳ್ಯ : ಬಸ್ಸಿನ ಹಿಂಬದಿಯ ಟಯರ್ ಮಹಿಳೆಯ ಕಾಲಿನ ಮೇಲೆ ಚಲಿಸಿ ಕಾಲು ಮುರಿತ



ಸುಳ್ಯ: ಬೆಳ್ಳಾರೆಯಿಂದ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ನಿಂದ ಸೋಣಂಗೇರಿ ಬಳಿ ಮಹಿಳೆಯೋರ್ವರು ಇಳಿಯುವ ಸಂದರ್ಭ ಬಿದ್ದು ಕಾಲಿಗೆ ಗಂಭೀರ ಗಾಯಗೊಂಡ ಘಟನೆ ಇಂದು ಸೋಣಂಗೇರಿಯಲ್ಲಿ ನಡೆದಿದೆ.

ಮಹಿಳೆ ದುಗಲಡ್ಕದ 60 ವರ್ಷ ಪ್ರಾಯದ ಕೊಳಂಜಿಕೋಡಿಯ ಅಬ್ದುಲ್ಲ ಎಂಬವರವ ಪತ್ನಿ ಮೈಮುನಾ ಎಂದು ಗುರುತಿಸಲಾಗಿದೆ.

ಬೆಳ್ಳಾರೆಯಿಂದ ಸುಳ್ಯಕ್ಕೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಬಂದ ಮಹಿಳೆ ಸೋಣಂಗೇರಿಯಲ್ಲಿ ಇಳಿಯಲಿದ್ದರು, ಆದರೆ ಮಹಿಳೆ ಬಸ್ ನಿಲ್ಲುವ ಮೊದಲೇ ಇಳಿದ ಕಾರಣ ಬಸ್ ನಿಂದ ಬಿದ್ದು ಬಸ್ಸಿನ ಹಿಂಭಾಗದ ಚಕ್ರ ಮಹಿಳೆಯ ಬಲಕಾಲಿನ ಮೇಲೆ ಚಲಿಸಿ ಗಂಭೀರ ಗಾಯವಾಗಿದೆ ಎನ್ನಲಾಗಿದೆ.
ಮಹಿಳೆಯನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಘಟನೆಯಿಂದ ಮಹಿಳೆಯ ಬಲಕಾಲಿನ ಮೊಣಭಾಗ ಮುರಿತಗೊಂಡಿರುವುದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!