ಕರಾವಳಿ

ಮಾರ್ಗದ ಬದಿಯಲ್ಲಿ ನಿಂತು ಭಾಷಣ ಮಾಡಿ ಯಾರನ್ನೋ ಬೈಯುವುದು ದೇಶ ಪ್ರೇಮವಲ್ಲ-ಯು.ಟಿ ಖಾದರ್



ಪುತ್ತೂರು: ಮಾರ್ಗದ ಬದಿಯಲ್ಲಿ ನಿಂತು ಭಾಷಣ ಮಾಡಿ ಯಾರನ್ನೋ ಬೈಯುವುದು ದೇಶ ಪ್ರೇಮವಲ್ಲ, ಬುಶ್ರಾ ಅಝೀಝ್‌ರವಂತೆ ಶಿಕ್ಷಣ ಸಂಸ್ಥೆ ಕಟ್ಟಿ ಮಕ್ಕಳಿಗೆ ಶಿಕ್ಷಣ ನೀಡಿ ಸುಸಂಸ್ಕೃತರನ್ನಾಗಿ ಮಾಡುವುದೇ ನಿಜವಾದ ದೇಶ ಪ್ರೇಮ ಎಂದು ಸ್ಪೀಕರ್ ಯು.ಟಿ ಖಾದರ್ ಹೇಳಿದರು. ಕಾವು ಬುಶ್ರಾ ವಿದ್ಯಾಸಂಸ್ಥೆಯಲ್ಲಿ ನಡೆದ ಸಂಸ್ಥೆಯ ಬೆಳ್ಳಿ ಹಬ್ಬ ಸಂಭ್ರಮ ‘ಬುವಿ ಉತ್ಸವ’ದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಾಗ ಅವರು ಬೆಳೆಯುವುದಲ್ಲದೇ ಇಡೀ ಮನೆ, ಕುಟುಂಬ ಬೆಳಗುತ್ತದೆ, ಪೋಷಕರು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲೇಬೇಕು ಎಂದು ಅವರು ಹೇಳಿದರು. ಮಕ್ಕಳಲ್ಲಿ ದೇಶ ಪ್ರೇಮದ ಬಗ್ಗೆ ಕಲಿಸಬೇಕು, ಶಿಕ್ಷಣ ಪಡೆದವರು ಅದನ್ನು ಸದ್ಬಳಕೆ ಮಾಡಬೇಕು. ಸಮಾಜಕ್ಕೆ ಒಳ್ಳೆಯದು ಮಾಡಬೇಕು ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!