ಈಶ್ವರಮಂಗಲ: ನೂಜಿಬೈಲುನಲ್ಲಿ ಕೃಷಿಗೆ ಲಗ್ಗೆಯಿಟ್ಟ ಕಾಡಾನೆ..!
ಪುತ್ತೂರು: ಕಾಡಾನೆಯೊಂದು ಕೃಷಿ ತೋಟಕ್ಕೆ ದಾಳಿ ನಡೆಸಿ ಹಾನಿ ಮಾಡಿರುವ ಘಟನೆ ಈಶ್ವರಮಂಗಲ ಸಮೀಪದ ನೂಜಿಬೈಲು ಎಂಬಲ್ಲಿ ಡಿ.20ರಂದು ನಡೆದಿದೆ.
ನೂಜಿಬೈಲು ನಿವಾಸಿ ಮೋಹನದಾಸ ಎಂಬವರ ತೋಟಕ್ಕೆ ನುಗ್ಗಿದ ಕಾಡಾನೆ ತೋಟದಲ್ಲಿ ತೆಂಗಿನ ಮರ ಹಾಗೂ ಇತರ ಮರಗಳಿಗೆ ಹಾನಿ ಮಾಡಿದೆ. ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
![](https://newsbites.in/wp-content/uploads/2023/12/img_20231221_1605012183299221080482181-1024x442.jpg)