Author: news_bites_admin

ಕ್ರೈಂಜಿಲ್ಲೆ

ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಮೂರನೇ ಆರೋಪಿ ಹಾಲಶ್ರೀ ಸ್ವಾಮೀಜಿ ಅರೆಸ್ಟ್

ಬೆಂಗಳೂರು: ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿಯಿಂದ ಎಂ ಎಲ್ ಎ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ. ಪಡೆದು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಮೂರನೇ

Read More
ಕರಾವಳಿ

ಅಬೂಬಕ್ಕರ್ ಪರಾಡ್ ನಿಧನ

ಪುತ್ತೂರು: ಸರ್ವೆ ಗ್ರಾಮದ ಪರಾಡ್ ನಿವಾಸಿ ಅಬೂಬಕ್ಕರ್ ಅವರು ಸೆ.18ರಂದು ಸಂಜೆ ಮಂಗಳೂರು ಖಾಸಗೀ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಮೃತರು ಐವರು ಪುತ್ರರು ಮತ್ತು ಐವರು ಪುತ್ರಿಯರನ್ನು ಅಗಲಿದ್ದಾರೆ.

Read More
ಕರಾವಳಿ

ಅ.8ರಂದು ಇರ್ದೆ ಪೇರಲ್ತಡ್ಕ ಬದ್ರಿಯಾ ಜುಮಾ ಮಸ್ಜಿದ್ ಉದ್ಘಾಟನೆ:ಸ್ವಾಗತ ಸಮಿತಿ ಚೇರ್‌ಮೆನ್ ಆಗಿ ಮುಹಮ್ಮದ್ ಹಾಜಿ ಕುಕ್ಕುವಳ್ಳಿ

ಪುತ್ತೂರು: ಬದ್ರಿಯಾ ಜುಮಾ ಮಸ್ಜಿದ್ ಪೇರಲ್ತಡ್ಕ -ಇರ್ದೆ ಇಲ್ಲಿ ನವೀಕೃತ ಮಸೀದಿ ಉಧ್ಘಾಟನೆ, ಸೌಹಾರ್ದ ಸಂಗಮ ಹಾಗೂ ಏಕದಿನ ಮತ ಪ್ರಭಾಷಣ ಅ.೮ರಂದು ನಡೆಯಲಿದ್ದು ಅಸ್ಸಯ್ಯದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಮಸೀದಿಯನ್ನು ಉದ್ಘಾಟಿಸಲಿದ್ದಾರೆ. ಆ ಪ್ರಯುಕ್ತ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಚೇರ್‌ಮೆನ್ ಆಗಿ ಮುಹಮ್ಮದ್ ಹಾಜಿ ಕುಕ್ಕುವಳ್ಳಿ, ಕನ್ವೀನರ್ ಆಗಿ ಅಬ್ದುಲ್ ಕರೀಂ ಪೇರಲ್ತಡ್ಕ, ಕೋಶಾಧಿಕಾರಿಯಾಗಿ ಶರೀಫ್ ಕುಂಞಿಲಡ್ಕ ಅವರನ್ನು ಆಯ್ಕೆ ಮಾಡಲಾಯಿತು. ವೈಸ್ ಚೇರ್‌ಮೆನ್‌ಗಳಾಗಿ ಕೆ.ಎಂ ಹಮೀದ್ ಕೊಮ್ಮೆಮ್ಮಾರ್, ಹಸೈನಾರ್ ಬೂಡು, ವೈಸ್ ಕನ್ವೀನರ್‌ಗಳಾಗಿ ಅಬ್ದುಲ್ ಹಮೀದ್ ಪೇರಲ್ತಡ್ಕ ಹಾಗೂ ಫೈಝಲ್ ಪೇರಳ್ತಡ್ಕ ಆಯ್ಕೆಯಾದರು. ಗೌರವ ಸಲಹೆಗಾರರಾಗಿ ಹಾಜಿ ಪಿ.ಐ ಇಸ್ಮಾಯಿಲ್ ದಾರಿಮಿ, ಇಬ್ರಾಹಿಂ ಮದನಿ ಅಲ್ ಹುಮೈದಿ ನೇರಳಕಟ್ಟೆ, ಹನೀಫ್ ಅಸ್ಲಮಿ ಸೊರಕೆ, ಮುಹಮ್ಮದ್ ಹಾಜಿ(ನವಾಝ್) ಅಬ್ದುಲ್ ರಹಿಮಾನ್ ಮಣ್ಣಾಪು, ಪಿ.ಎ ಮುಹಮ್ನದ್ ಮದನಿ ಆಯ್ಕೆಯಾದರು. 100ಕ್ಕಿಂತ ಹೆಚ್ಚು ಜನ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು.

Read More
ಕರಾವಳಿಕ್ರೈಂ

ಬಂಟ್ವಾಳ: ಇಬ್ಬರು ಕಳ್ಳರ ಬಂಧನ

ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ: 01-09-2023 ರಂದು ನಡೆದ ಸುಮಾರು 5,36,000/- ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಹಾಗೂ ಸುಮಾರು 3,000/- ರೂಪಾಯಿ ಮೌಲ್ಯದ ಬೆಳ್ಳಿಯ

Read More
ಕ್ರೈಂಜಿಲ್ಲೆ

ಚೈತ್ರಾ ಕುಂದಾಪುರ ವಂಚನೆ ಕೇಸ್: ವಿಚಾರಣೆಗೆ ಹಾಜರಾಗಲು ಸೂಚಿಸಿದ ಸಿಸಿಬಿ ಪೊಲೀಸ್

ಬಿಜೆಪಿ ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ಗೋವಿಂದ ಬಾಬು ಪೂಜಾರಿ ಅವರಿಗೆ ಚೈತ್ರಾ ಕುಂದಾಪುರ ಮತ್ತು ಟೀಂ ಕೋಟ್ಯಾಂತರ ರೂ. ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಗೋವಿಂದ

Read More
ಕರಾವಳಿರಾಜಕೀಯ

ವಾಸಿಸಲು ಮನೆಯಿಲ್ಲದ ಕಾರ್ಯಕರ್ತನ ನೋವಿಗೆ ಸ್ಪಂದಿಸಿ ಮನೆ ನಿರ್ಮಿಸಿಕೊಟ್ಟ ಮುಂಡೂರು ವಲಯ ಕಾಂಗ್ರೆಸ್

ಪುತ್ತೂರು: ಮನೆ ಇಲ್ಲದೇ ಸಂಕಷ್ಟದಲ್ಲಿದ್ದ ಕುಟುಂಬವೊಂದಕ್ಕೆ ಮುಂಡೂರು ವಲಯ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಮನೆ ನಿರ್ಮಿಸಿಕೊಡುವ ಮೂಲಕ ಮಾದರಿಯಾಗಿದ್ದಾರೆ. ಮುಂಡೂರು ಬೂತ್ 90ರ ಕಾರ್ಯದರ್ಶಿ ಜಗದೀಶ್ ಬದಿಯಡ್ಕ ಅವರಿಗೆ ಮುಂಡೂರು ವಲಯ ಕಾಂಗ್ರೆಸ್ ವತಿಯಿಂದ ನೂತನ ಮನೆ ನಿರ್ಮಿಸಲಾಗಿದ್ದು ಮನೆಯ ಹಸ್ತಾಂತರ ಕಾರ್ಯವನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ್ ರೈ ನೆರವೇರಿಸಿದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಯಾಕೂಬ್ ಮುಲಾರ್, ಎಸ್.ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ ನರಿಮೊಗರು, ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಸುಪ್ರೀತ್ ಕಣ್ಣರಾಯ, ಮುಂಡೂರು ಬೂತ್ ಅಧ್ಯಕ್ಷ ಇಬ್ರಾಹಿಂ ಮುಲಾರ್, ಕೆಮ್ಮಿಂಜೆ ಬೂತ್ ಅಧ್ಯಕ್ಷ ಗಣೇಶ್ ಕೊರುಂಗು, ಪ್ರಮುಖರಾದ ಅಣ್ಣಿ ಪೂಜಾರಿ ಹಿಂದಾರು, ಅಶ್ರಫ್ ಮುಲಾರ್, ರಝಾಕ್ ಮುಲಾರ್, ಜಗದೀಶ್ ಬದಿಯಡ್ಕ ಮತ್ತಿತರ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Read More
ಕರಾವಳಿ

ಸುಳ್ಯ :ಆದಿದ್ರಾವಿಡ ಸಮ್ಮಿಲನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಆದಿದ್ರಾವಿಡ ಯುವ ವೇದಿಕೆ(ರಿ) ದ. ಕ ಹಾಗೂ ಸುಳ್ಯ ತಾಲೂಕು ಸಮಿತಿ ಹಾಗೂ ತಾಲೂಕು ಮಹಿಳಾ ಸಮಿತಿ ಮತ್ತು ಗ್ರಾಮ ಘಟಕ ಸಮಿತಿಗಳ ನೇತೃತ್ವದಲ್ಲಿ ಆದಿದ್ರಾವಿಡ ಸಮ್ಮಿಲನ

Read More
ಕರಾವಳಿ

ಪುತ್ತೂರು: ಬ್ರೈಟ್ ಭಾರತ್ ಸಂಸ್ಥೆಯಿಂದ ಮೆಗಾ ಪ್ರಾಜೆಕ್ಟ್: ಕೇವಲ ಒಂದು ಸಾವಿರದಂತೆ ಪಾವತಿಸಿ ಎರಡು ಬೆಡ್‌ರೂಮಿನ ಮನೆ ನಿಮ್ಮದಾಗಿಸಿ..!

ಪುತ್ತೂರು: ತಾಲೂಕಿನಾದ್ಯಂತ ಈಗಾಗಲೇ ಹೆಸರುವಾಸಿಯಾಗಿರುವ ಬ್ರೈಟ್ ಭಾರತ್ ಸಂಸ್ಥೆಯು ಹೊಸ ಪ್ರಾಜೆಕ್ಟ್ ಅನ್ನು ಜನತೆಗೆ ಪರಿಚಯಿಸಿದ್ದು ಈಗಾಗಲೇ ಜನರು ಇದನ್ನು ಅದ್ದೂರಿಯಾಗಿ ಸ್ವೀಕರಿಸಿದ್ದು 15 ದಿನದಲ್ಲಿ ಬರೋಬ್ಬರಿ

Read More
ಅಂತಾರಾಷ್ಟ್ರೀಯಕ್ರೀಡೆ

ಏಷ್ಯಾ ಕಪ್ ಕ್ರಿಕೆಟ್ ಫೈನಲ್: ಶ್ರೀಲಂಕಾವನ್ನು ಬಗ್ಗುಬಡಿದ ಭಾರತ ಚಾಂಪಿಯನ್

ಕೊಲಂಬೊ: ಏಷ್ಯಾ ಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ ಸುಲಭ ಜಯ ಸಾಧಿಸಿದೆ.ಪ್ರೇಮದಾಸ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಲಂಕಾ ಕೇವಲ 15.2

Read More
error: Content is protected !!