ಕರಾವಳಿ

ಕೋಡಿಂಬಾಡಿ: ಹಿರಿಯ ವ್ಯಕ್ತಿಯ ಮನೆಗೆ  ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಶಾಸಕ ಅಶೋಕ್ ರೈ

ಪುತ್ತೂರು: ಕೋಡಿಂಬಾಡಿಯ ಬೀಡಿ ಉದ್ಯಮಿ, ಹಿರಿಯರು, ಕೃಷಿಕರು ಮತ್ತು ಶಾಸಕರ ತಂದೆಯವರ ಆತ್ಮೀಯರು ಆಗಿದ್ದ ಮಹಮ್ಮದ್(ಮೋನುಚ್ಚ) ಭಾರತ್ ರವರ ಮನೆಗೆ ಶಾಸಕರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಈ ಸಂದರ್ಭದಲ್ಲಿ ಕೋಡಿಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಮೋನಪ್ಪ ಗೌಡ ಪಮ್ಮನಮಜಲು, ಕಾರ್ಯದರ್ಶಿ ಯೋಗೀಶ ಸಾಮಾನಿ ಸಂಪಿಗೆದಡಿ- ಮಠಂತಬೆಟ್ಟು, ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ ನಿರಂಜನ ರೈ ಮಠಂತಬೆಟ್ಟು, ಹಾಲು ಉದ್ಫಾದಕರ ಸಹಕಾರಿ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಡಿ ನಡುಮನೆ, ಬೂತ್ ಅಧ್ಯಕ್ಷರುಗಳಾದ ಪ್ರಭಾಕರ ಸಾಮಾನಿ ಮಠಂತಬೆಟ್ಟು, ಯತೀಶ್ ಶೆಟ್ಟಿ ಬರೆಮೇಲು, ವಿದ್ಯುತ್ ಸಲಹಾ ಸಮಿತಿಯ ಸದಸ್ಯೆ ರಶ್ಮಿ ನಿರಂಜನ ರೈ ಮಠಂತಬೆಟ್ಟು, ಹಿರಿಯರಾದ ಹುಸೈನ್ ಕೆ.ಬಿ.ಕೆ, ದಾವೂದ್ ಕೋಡಿಯಾಡಿ, ಅದ್ರಾಮ ಕೋಡಿಂಬಾಡಿ, ಪ್ರಮುಖರಾದ ಸಬೀರ್ ಸರ್ಗ, ಆದಂ ಕುಂಞಿ, ಹಂಝಾ ಮುಂತಾದವರು ಜೊತೆಗಿದ್ದರು.

Leave a Reply

Your email address will not be published. Required fields are marked *

error: Content is protected !!