ಕರಾವಳಿಕ್ರೈಂ

ಬಿಸಿ ರೋಡ್ ನಲ್ಲಿ ಬಸ್ಸಿಗೆ ಕಾಯುತ್ತಿದ್ದ ವ್ಯಕ್ತಿಯ ಕಿಸೆಯಿಂದ ಹಣದ ಕಟ್ಟು ಎಗರಿಸಿದ ಆರೋಪಿ ಅರೆಸ್ಟ್

ಬಂಟ್ವಾಳ: ವ್ಯಕ್ತಿಯೊಬ್ಬರಿಂದ ಹಣ ಕಳ್ಳತನ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕುಂದಾಪುರ ತಾಲೂಕಿನ ಬೆಳ್ಳಾಲ ಗ್ರಾಮದ ರಂಗನಾಥ ಎಂಬವರು ಬಿ.ಸಿ ರೋಡ್ ನ ಬಸ್‌ ನಿಲ್ದಾಣದ ಬಳಿ ಬಸ್ಸಿಗಾಗಿ ಕಾಯುತ್ತಿರುವ  ಸಮಯ ಅವರ ಕಿಸೆಯಲ್ಲಿದ್ದ 50000/ ರೂಪಾಯಿಯ 2 ಕಟ್ಟನ್ನು ಕಳ್ಳತನ ಮಾಡಿರುವ ಪ್ರಕರಣಕ್ಕೆ ಸಂಬಂದಿಸಿದಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿ ನಜೀರ್

ಆರೋಪಿ ಬಂಧನಕ್ಕೆ ಬಲೆ ಬೀಸಿದ ಪೊಲೀಸರು ಆರೋಪಿ ತ್ರಿಶೂರ್ ಜಿಲ್ಲೆಯ  ಚಾವಕ್ಕಾಡು ಗ್ರಾಮದ ನಜೀರ್ (55) ಎಂಬಾತನನ್ನು ಸೆ.19ರಂದು ಮಂಗಳೂರಿನ ಹಂಪನಕಟ್ಟೆ ಎಂಬಲ್ಲಿಂದ ವಶಕ್ಕೆ ಪಡೆದು ಆತನಿಂದ ರೂ.22,000 ನಗದು ಸ್ವಾಧೀನಪಡಿಸಿಕೊಂಡು ಆರೋಪಿಯನ್ನು ಸೆ. 20ರಂದು ಬಂಟ್ವಾಳ ಏ.ಸಿ. ಜೆ ಮತ್ತು ಜೆ.ಎಂ.ಏಪ್.ಸಿ  ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!