ಕರಾವಳಿ

ಕರಾವಳಿ

ಸುಳ್ಯ: ಹೆರಿಗೆಯ ಬಳಿಕ ಆಸ್ಪತ್ರೆಯ ಹಣ ನೀಡಲು ಸಾಧ್ಯವಾಗದೆ ಸಂಕಷ್ಟಕ್ಕೀಡಾದ ಮಹಿಳೆಗೆ ಆಪತ್ಬಾಂಧವರಾದ ದಾನಿಗಳು: ದಾನಿಗಳೊಂದಿಗೆ ಕೈಜೋಡಿಸಿದ ಕೊಡಗಿನ ಮಾಧ್ಯಮ ‘ಸ್ಪಂದನ ಬಳಗ’

ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ಮೂಲದ ಬಡ ಮಹಿಳೆಯೋರ್ವರು ಮಗುವಿಗೆ ಜನ್ಮನೀಡಿ ಆಸ್ಪತ್ರೆಯ ಹಣ ಭರಿಸಲು ಸಾಧ್ಯವಾಗದೆ ಸಂಕಷ್ಟಕ್ಕಿಡಾಗಿ,ಸುಳ್ಯದ ದಾನಿಗಳು ಹಾಗೂ ಕೊಡಗು ಮಾಧ್ಯಮ

Read More
ಕರಾವಳಿಕ್ರೈಂ

ಸುಬ್ರಹ್ಮಣ್ಯ: ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಕಾಡಿನಲ್ಲಿ ಪತ್ತೆ

ಸುಬ್ರಹ್ಮಣ್ಯದ ಕುಮಾರಧಾರ ಬಳಿಯ ಕಾಡಿನೊಳಗೆ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯೋರ್ವರ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಫೆ. 3 ರಂದು ಸಂಜೆ ಪತ್ತೆಯಾಗಿದೆ. ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿರುವ

Read More
ಕರಾವಳಿ

ಸುಳ್ಯ : ಏಕಾಏಕಿ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಕೊನೆಯುಸಿರೆಳೆದ ಯುವಕ

ಒಮ್ಮಿಂದೊಮ್ಮೆಲೆ ಅನಾರೋಗ್ಯಕ್ಕೆ ಒಳಗಾದ ಯುವಕ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಕೊನೆಯುಸಿರೆಳೆದ ಘಟನೆ ಫೆ.3 ರಂದು ಪಂಜದ ಕರಿಕ್ಕಳದಿಂದ ವರದಿಯಾಗಿದೆ. ಐವತ್ತೊಕ್ಲು ಗ್ರಾಮದ ಪುರಿಯ ಮೋನಪ್ಪ ಗೌಡ ಮತ್ತು

Read More
ಕರಾವಳಿ

ಪುತ್ತೂರು: ಇಹ್ಸಾನ್ ಫೌಂಡೇಶನ್ ವತಿಯಿಂದ 5 ಜೋಡಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ

ಪುತ್ತೂರು: ಕಳೆದ 5 ವರ್ಷಗಳಿಂದ ಪ್ರತೀ ವರ್ಷ ಪುತ್ತೂರು ತಾಲೂಕಿನಲ್ಲಿ ಇಹ್ಸಾನ್ ಫೌಂಡೇಶನ್ ನಡೆಸಿಕೊಂಡು ಬರುತ್ತಿರುವ ‘ಸಾಂತ್ವಾನ ಜಾಗೃತಿ ಸರಳ ವಿವಾಹ ಕಾರ್ಯಕ್ರಮ’ ಜ.29ರಂದು ಕೆಮ್ಮಾಯಿ ಬದ್ರಿಯಾ

Read More
ಕರಾವಳಿಕ್ರೈಂ

ಮುಂಡೂರು: ಅಶ್ರಫ್ ಪಟ್ಟೆ ಅವರಿಗೆ ಹಲ್ಲೆ ಪ್ರಕರಣ: 10 ಮಂದಿಯ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ಮುಂಡೂರು ಪಟ್ಟೆ ನಿವಾಸಿ ಅಶ್ರಫ್‌ ಪಟ್ಟೆ ಅವರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ 10 ಮಂದಿ ವಿರುದ್ಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಜ್ಜಿಕಟ್ಟೆ

Read More
ಕರಾವಳಿಕ್ರೈಂ

ಮಂಗಳೂರು: ಚಿನ್ನದ ಅಂಗಡಿಯಲ್ಲಿ ವ್ಯಕ್ತಿಯೋರ್ವರಿಗೆ ಚೂರಿ ಇರಿತ- ಮೃತ್ಯು

ಮಂಗಳೂರು: ಚಿನ್ನದ ಅಂಗಡಿಯಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿ ಇರಿದ ಘಟನೆ ಹಂಪನಕಟ್ಟೆಯ ಬಳಿ ನಡೆದಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನಡೆದಿದೆ. ಹಂಪನಕಟ್ಟೆಯ ಮಂಗಳೂರು ಜ್ಯುವೆಲ್ಲರ್ಸ್ ನಲ್ಲಿ ಇಂದು ಸಂಜೆ

Read More
ಕರಾವಳಿ

ಅಲ್ಪಸಂಖ್ಯಾತರನ್ನು ಅವಕಾಶ ವಂಚಿತರನ್ನಾಗಿಸುವ ಷಡ್ಯಂತರ ನಡೆಯುತ್ತಿದೆ: ಮಾಡನ್ನೂರು ನೂರುಲ್ ಹುದಾ ಸಾಹಿತ್ಯೋತ್ಸವದಲ್ಲಿ ರಾ ಚಿಂತನ್

ಪುತ್ತೂರು: ಬಹುತೇಕ ಸಮಸ್ಯೆಗಳಿಗೆ ಶಿಕ್ಷಣದಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಿದ್ದು ಸಮಸ್ಯೆ, ಸಂಕಷ್ಟ, ತೊಂದರೆಗಳನ್ನು ಸವಾಲಾಗಿ ಸ್ವೀಕರಿಸಿ ನಿರ್ಧಿಷ್ಟ ಗುರಿಯೊಂದಿಗೆ ನಾವು ಸಾಗಬೇಕಾಗಿರುವುದು ಕಾಲದ ಅಗತ್ಯತೆ ಮತ್ತು ಅನಿವಾರ್ಯತೆಯಾಗಿದೆ ಎಂದು ಚಿಂತಕ, ಪತ್ರಕರ್ತ ರಾ ಚಿಂತನ್ ಹೇಳಿದರು. ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ ಅಕಾಡೆಮಿಯಲ್ಲಿ ಜರುಗಿದ ಮೂರು ದಿನಗಳ ಸಾಹಿತ್ಯೋತ್ಸವದ ಎರಡನೇ ದಿನವಾದ ಫೆ.2ರಂದು ‘ಅಲ್ಪಸಂಖ್ಯಾತರ ರಾಜಕೀಯ ಪ್ರಾತಿನಿಧ್ಯ ಹಾಗೂ ನೈತಿಕ ಪತ್ರಿಕೊಧ್ಯಮ’ ಎನ್ನುವ ವಿಷಯದಲ್ಲಿ ಅವರು ಮಾತನಾಡಿದರು. ಜನಸಂಖ್ಯೆ ಆಧಾರದಲ್ಲಿ ರಾಜಕೀಯ ಪ್ರಾತಿನಿಧ್ಯ ಸಿಗಬೇಕಾದ ಅವಶ್ಯಕತೆಯಿದ್ದು ದೇಶದಲ್ಲಿ ಮುಸ್ಲಿಂ ರಾಜಕೀಯ ಪ್ರಾತಿನಿಧ್ಯ ತೀರಾ ಕಡಿಮೆಯಾಗಿದೆ. ಮುಸ್ಲಿಂ ಜನಸಂಖ್ಯೆ ಆಧಾರದಲ್ಲಿ ದೇಶದಲ್ಲಿ 77 ಸಂಸದರು ಇರಬೇಕಿತ್ತು, ಆದರೆ ಕೇವಲ 27 ಸಂಸದರು ಮಾತ್ರ ಇದ್ದಾರೆ ಎಂದು ಅವರು ಹೇಳಿದರು. ಅಲ್ಪಸಂಖ್ಯಾತ ಸಮುದಾಯದ ಮೇಲೆ ನಿರಂತರ ಅನ್ಯಾಯಗಳಾಗುತ್ತಿದ್ದು ಅವಕಾಶದಿಂದ ವಂಚಿತರನ್ನಾಗಿಸುವ ಷಡ್ಯಂತ್ರವೂ ನಡೆಯುತ್ತಿದೆ. ಈಗ ಇರುವ ಸಮಸ್ಯೆ ಮುಂದಕ್ಕೂ ಮುಂದುವರಿಯಬಾರದು. ಮುಂದಿನ ಕಾಲಕ್ಕೆ ಈಗಿರುವ ಸಮಸ್ಯೆ ಸತ್ತು ಹೋಗಬೇಕು, ಅದಕ್ಕೆ ಅಲ್ಪಸಂಖ್ಯಾತರು ರಾಜಕೀಯವಾಗಿ ಪ್ರಾತಿನಿಧ್ಯ ಪಡೆಯಬೇಕಾದ ಅವಶ್ಯಕತೆಯಿದೆ ಎಂದು ಅವರು ಹೇಳಿದರು. ಸಣ್ಣ ಪುಟ್ಟ ವಿಚಾರಗಳಿಗೆ ದುಡುಕದೆ ನಾವು ಶಾಂತಿ ಕಾಪಾಡಬೇಕು. ಅಲ್ಪಸಂಖ್ಯಾತರನ್ನು ಪ್ರಚೋದಿಸುವ ಕಾರ್ಯ ನಡೆಯುತ್ತಿದ್ದು ಅದಕ್ಕೆ ಸಮುದಾಯ ಸಿಟ್ಟಾಗಬಾರದು, ಕೋಪಗೊಳ್ಳಬಾರದು ಬದಲಾಗಿ ಯುಕ್ತಿಯಿಂದ, ಪ್ರೌಢಿಮೆಯಿಂದ ಮುಂದಡಿಯಿಡಬೇಕು, ಆಗ ನಮ್ಮಿಂದ ಕೆಟ್ಟ ಪ್ರತಿಕ್ರಿಯೆ ಬಯಸುವವರೂ ಸೋತು ಹೋಗುತ್ತಾರೆ ಎಂದು ಅವರು ಹೇಳಿದರು. ರಾಜಕೀಯವಾಗಿ ಮುಸ್ಲಿಮರು ಸಬಲೀಕರಣಗೊಳ್ಳಬೇಕಾದರೆ ತಮ್ಮ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ಮೊದಲು ಚೆನ್ನಾಗಿ ಅರಿತುಕೊಂಡಿರಬೇಕು. ಪ್ರಜ್ಞಾವಂತಿಕೆ ಬೆಳೆಸಿಕೊಳ್ಳುವುದರ ಜೊತೆಗೆ ನಮ್ಮ ಹಕ್ಕುಗಳನ್ನು ಕೇಳಲು ಸಂಘಟಿತರಾಗಬೇಕು. ದೇಶದ ಸಂವಿಧಾನದಡಿಯಲ್ಲಿ ನಾವು ಹೇಗೆ ಬದುಕಬೇಕೋ ಹಾಗೆಯೇ ಬದುಕಬೇಕು ಎಂದು ಅವರು ಹೇಳಿದರು. ಕೇವಲ 4% ಇರುವ ಸಮುದಾಯ ದೇಶದ ಎಲ್ಲ ಕ್ಷೇತ್ರಗಳಲ್ಲೂ ತುಂಬಿ ತುಳುಕಿದ್ದು 20% ಮೇಲ್ಪಟ್ಟಿರುವ ಮುಸ್ಲಿಂ ಸಮುದಾಯ ತೀರಾ ಹಿಮದುಳಿದಿದೆ, ಇದು ಮುಂದಕ್ಕೂ ಹೀಗೆಯೇ ಮುಂದುವರಿಯಬಾರದು. ಇದನ್ನು ಬದಲಾಯಿಸಬೇಕು. ರಾಜಕೀಯ ಇತಿಹಾಸವನ್ನು ಮಕ್ಕಳು ಹೆಚ್ಚು ಓದಬೇಕು ಎಂದು ರಾ ಚಿಂತನ್ ಹೇಳಿದರು. ವಿದ್ಯಾರ್ಥಿಗಳು ಉತ್ತಮವಾಗಿ ಓದಿ ಮುಂದಕ್ಕೆ ಸಾಧನೆ ಮಾಡಬೇಕು. ಐಎಎಸ್, ಐಪಿಎಸ್ ಆಗಬೇಕು. ಅಲ್ಪಸಂಖ್ಯಾತ ಸಮುದಾಯದ ಸಮಸ್ಯೆ ಕಾಲಕಾಲಕ್ಕೂ ಇರಬಾರದು ಎಂದು ಅವರು ಹೇಳಿದರು. ಪತ್ರಿಕೆ, ಚಾನೆಲ್‌ಗಳು ತಮ್ಮ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸುವ ಒಂದು ಕಾಲ ಇತ್ತು. ಆದರೆ ಈಗ ಕಾಲ ಬದಲಾಗಿದೆ. ಜಾಹೀರಾತು, ಸರ್ಕ್ಯುಲೇಶನ್‌ನಿಂದ ನಡೆಯುತ್ತಿದ್ದ ಬಹುತೇಕ ಮಾಧ್ಯಮ ಈಗ ರಾಜಕೀಯದವರ ಅಡಿಯಾಳಾಗಿ ಕಾರ್ಯ ನಿರ್ವಹಿಸುತ್ತಿದೆ. ಸತ್ಯವನ್ನು ಮರೆಮಾಚಿ ಸುಳ್ಳನ್ನು ವೈಭವೀಕರಿಸುವ ಮಾಧ್ಯವ ಇಂದು ಅಧಿಕವಾಗಿದೆ ಎಂದು ಅವರು ಹೇಳಿದರು. ಸತ್ಯ ಹೇಳುವವರನ್ನು, ಸತ್ಯ ಬರೆಯುವವರನ್ನು ಬಾಯಿ ಮುಚ್ಚಿಸುವ, ಜೈಲಿಗಟ್ಟುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದ್ದು ಮಾಧ್ಯಮಗಳು ಯಾರದೋ ಹಿತ ಕಾಯುತ್ತಾ ತಮ್ಮ ಕ್ಷೇತ್ರಕ್ಕೆ ದ್ರೋಹ ಬಗೆಯುತ್ತಿದೆ. ನ್ಯಾಯಯುತ ಮಾಧ್ಯಮಗಳು ಕೆಲವೊಂದು ಇದೆಯಾದರೂ ಅವುಗಳಿಗೂ ತೊಂದರೆ ಕೊಡುವ ಕೆಟ್ಟ ಕೆಲಸ ನಡೆಯುತ್ತಿದೆ. ಹಾಗಾಗಿ ನಾವೇ ಮಾಧ್ಯಮವಾಗಿ ಕೆಲಸ ಮಾಡಬೇಕು. ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರಕಟಿಸಬೇಕು. ಸಾಮಾಜಿಕ ಜಾಲ ತಾಣಗಳಲ್ಲಾದರೂ ನಮ್ಮಲ್ಲಿರುವ ಸತ್ಯವನ್ನು ಸಂವಿಧಾನಾತ್ಮಕವಾಗಿ ಬರೆಯುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ರಾ ಚಿಂತನ್ ಹೇಳಿದರು.

Read More
ಕರಾವಳಿ

ನರಿಮೊಗರು ಸಿ.ಎ ಬ್ಯಾಂಕ್ ಉಪಾಧ್ಯಕ್ಷರಾಗಿ ಲತಾ ಮೋಹನ್ ಆಯ್ಕೆ

ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾಗಿದ್ದ ಹೊನ್ನಪ್ಪ ಪೂಜಾರಿ ಕೈಂದಾಡಿಯವರು ತಮ್ಮ ಉಪಾಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ರಾಜೀನಾಮೆ ನೀಡಿದ್ದು ಅವರ ತೆರವಾದ ಸ್ಥಾನಕ್ಕೆ

Read More
ಕರಾವಳಿಕ್ರೈಂ

ಪುತ್ತೂರು: ಮುರದಲ್ಲಿ ಸರಣಿ ಕಳ್ಳತನ: ನಗದು, ಸೊತ್ತುಗಳ ಕಳವು

ಪುತ್ತೂರು: ಮುರ ಮಾಧವ ಕಾಂಪ್ಲೆಕ್ಸ್ ನಲ್ಲಿರುವ ಧರಿತ್ರಿ ಸೌಹಾರ್ದ ಸಹಕಾರಿ ಸಂಸ್ಥೆ ಮತ್ತು ಪಕ್ಕದಲ್ಲಿರುವ ಮಹಾಲಿಂಗೇಶ್ವರ ಇಲೆಕ್ಟ್ರಿಕ್ ಅಂಗಡಿಗೆ ನುಗ್ಗಿದ ಕಳ್ಳರು ನಗದು, ಸೊತ್ತುಗಳನ್ನು ಕಳವು ಮಾಡಿದ

Read More
ಕರಾವಳಿಕ್ರೈಂ

ಮುಂಡೂರು: ಪಟ್ಟೆಯಲ್ಲಿ ಜಾಗದ ವಿಚಾರದಲ್ಲಿ ಹಲ್ಲೆ: ಓರ್ವ ಗಂಭೀರ

ಪುತ್ತೂರು: ಮುಂಡೂರು ಪಟ್ಟೆ ಎಂಬಲ್ಲಿ ಜಾಗದ ವಿಚಾರಕ್ಕೆ ಸಂಬಂಧಿಸಿ ಹೊಡೆದಾಟ ನಡೆದಿದ್ದು ಹಲ್ಲೆಯಿಂದ ಅಶ್ರಫ್ ಪಟ್ಟೆ ಎನ್ನುವವರು ಗಂಭೀರ ಗಾಯಗೊಂಡಿರುವ ಬಗ್ಗೆ ಇಂದು ಸಂಜೆ ವರದಿಯಾಗಿದೆ. ಅಶ್ರಫ್

Read More
error: Content is protected !!