ಕರಾವಳಿ

ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರ ತಾಯಿ ನಿಧನ:
ಸೊರಕೆಯ ಮನೆಗೆ ಸ್ಪೀಕರ್ ಯು.ಟಿ ಖಾದರ್ ಭೇಟಿ, ಸಾಂತ್ವನ





ಪುತ್ತೂರು: ಮಾಜಿ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆಯವರ ತಾಯಿ ಸುನೀತಿ(92.ವ) ಅವರು ಜು.8ರಂದು ನಿಧನ ಹೊಂದಿದ್ದು ಅವರ ಸೊರಕೆಯ ಮನೆಗೆ ವಿಧಾನ ಸಭೆಯ ಸ್ಪೀಕರ್ ಯು.ಟಿ ಖಾದರ್ ಅವರು ಜು.9ರಂದು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.



ಸುರೇಶ್ ಕುಮಾರ್ ಸೊರಕೆ ಜೊತೆ ಕೆಲ ಕಾಲ ಮಾತನಾಡಿದ ಸ್ಪೀಕರ್ ಖಾದರ್ ನಂತರ ತೆರಳಿದರು. ಸುರೇಶ್ ಕುಮಾರ್ ಸೊರಕೆಯವರ ಪತ್ನಿ ಹರ್ಷಿಣಿ, ಪುತ್ರ ಸುಹಾಸ್, ಪುತ್ರಿ ಸುಹಾಣಿ ಉಪಸ್ಥಿತರಿದ್ದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರು ಉಡುಪಿಗೆ ಹೋಗಿದ್ದರಿಂದ ಸ್ಪೀಕರ್ ಬರುವ ವೇಳೆ ಮನೆಯಲ್ಲಿರಲಿಲ್ಲ.

ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ವಿ.ಎಚ್.ಅಬ್ದುಲ್ ಶಕೂರ್ ಹಾಜಿ, ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಅಧ್ಯಕ್ಷ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಸರ್ವೆ ವಲಯ ಕಾಂಗ್ರೆಸ್ ಅಧ್ಯಕ್ಷ ಎಸ್.ಡಿ ವಸಂತ, ಬೂತ್ ಅಧ್ಯಕ್ಷ ಯತೀಶ್ ರೈ ಮೇಗಿನಗುತ್ತು, ಮುಂಡೂರು ಗ್ರಾ.ಪಂ ಸದಸ್ಯರಾದ ಕಮಲೇಶ್ ಎಸ್.ವಿ, ಮಹಮ್ಮದ್ ಆಲಿ ನೇರೋಳ್ತಡ್ಕ, ಮಾಜಿ ಸದಸ್ಯ ಎಸ್.ಎಂ ಶರೀಫ್ ಸರ್ವೆ, ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ಅಝೀಝ್ ರೆಂಜಲಾಡಿ, ಕಾಂಗ್ರೆಸ್ ಸೇವಾ ದಳದ ಜಂಟಿ ಕಾರ್ಯದರ್ಶಿ ಹಂಝ ಕೂಡುರಸ್ತೆ, ಪ್ರಮುಖರಾದ ಸಿನಾನ್ ಪಡೀಲ್, ಇಬ್ರಾಹಿಂ ಅಜ್ಜಿಕ್ಕಲ್, ರಝಾಕ್ ಕೂಡುರಸ್ತೆ, ಶರೀಫ್ ಅಜ್ಜಿಕ್ಕಲ್, ಅಶ್ರಫ್ ಕೂಡುರಸ್ತೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!