ಜಿಲ್ಲೆ

ವಿರಾಜಪೇಟೆ: ವನ್ಯಜೀವಿ ವಲಯ ಮತ್ತು ಅರಣ್ಯ ವ್ಯಾಪ್ತಿ ಅಧಿಕಾರಿಗಳ ಕಾರ್ಯಾಚರಣೆ: ಮೀಸಲು ಅರಣ್ಯ ಪರಿಸರದಲ್ಲಿ ತ್ಯಾಜ್ಯ ಎಸೆಯುತ್ತಿದ್ದವರನ್ನು ವಾಹನ ಸಮೇತ ವಶಕ್ಕೆ ಪಡೆದ ಅಧಿಕಾರಿಗಳು



ಕೊಡಗು ಜಿಲ್ಲೆಯ ವಿರಾಜಪೇಟೆ ಸಮೀಪ ಮೀಸಲು ಅರಣ್ಯದೊಳಗೆ ತ್ಯಾಜ್ಯಗಳ ಕಟ್ಟುಗಳು ಎಲ್ಲೆಂದರಲ್ಲಿ ಕಂಡು ಬರುತ್ತಿತ್ತು.

ಇತ್ತೀಚಿನ ಕೆಲವು ದಿನಗಳಿಂದ ಈ ತ್ಯಾಜ್ಯದ ಕಟ್ಟುಗಳು ಅಧಿಕವಾಗಲು ಪ್ರಾರಂಭಿಸಿದ್ದವು.

ಇದನ್ನು ತೀವ್ರವಾಗಿ ಪರಿಗಣಿಸಿದ ಮಾಕುಟ್ಟ ವನ್ಯಜೀವಿ ವಲಯ,ಅರಣ್ಯ ವ್ಯಾಪ್ತಿಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ
ವನ್ಯಜೀವಿ ಮತ್ತು ವಿರಾಜಪೇಟೆ ಅರಣ್ಯ ವಿಭಾಗದ ಡಿಸಿಎಫ್ ಎಸಿಎಫ್ ಮಾರ್ಗದರ್ಶನದಲ್ಲಿ ತ್ಯಾಜ್ಯಗಳನ್ನು ಎಸೆಯುತ್ತಿದ್ದ ಲಾರಿ ಮತ್ತು 15 ಚೀಲ ತ್ಯಾಜ್ಯದೊಂದಿಗೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!