ಸುಳ್ಯ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ಸುಳ್ಯ ಜಟ್ಟಿಪಳ್ಳ ನಿವಾಸಿ ವಿಶ್ವನಾಥ ಭಂಡಾರಿ ಎಂಬುವವರು ಅವರ ಮನೆಯ ಜಗಲಿಯ ಕಬ್ಬಿಣದ ಹಲಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಸಂಜೆ ವರದಿಯಾಗಿದೆ.

ಇವರು ಸ್ವಲ್ಪ ಸಮಯದಿಂದ ಕಾಲು ನೋವಿನಿಂದ ಮನೆಯಲ್ಲೇ ಇರುತ್ತಿದ್ದರು.
ಇವತ್ತು ಇವರ ಪತ್ನಿ ಕಾರ್ಯಕ್ರಮ ನಿಮಿತ್ತವಾಗಿ ಮನೆಯಿಂದ ಹೊರಗೆ ಹೋದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇವರಿ 72 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.