ಕರಾವಳಿಕ್ರೀಡೆರಾಜ್ಯ

ಮೈಸೂರು: ರಾಜ್ಯ ಮಟ್ಟದ ಅಂತರ್ಜಿಲ್ಲಾ ವಾಲಿಬಾಲ್ ಪಂದ್ಯಾಟದಲ್ಲಿ ಎಸ್.ಸಂಶುದ್ದಿನ್ ರವರಿಗೆ ಸನ್ಮಾನ



ಕರ್ನಾಟಕ ರಾಜ್ಯ ವಾಲಿಬಾಲ್ ಸಂಸ್ಥೆ ಮತ್ತು ಮೈಸೂರು ಜಿಲ್ಲಾ ವಾಲಿಬಾಲ್ ಸಂಸ್ಥೆಯ ಆಶ್ರಯದಲ್ಲಿ ಜ 25 ರಂದು ನಡೆದ ಕರ್ನಾಟಕ ರಾಜ್ಯ ಮಟ್ಟದ ಹೊನಲು ಬೆಳಕಿನ ಅಂತರ ಜಿಲ್ಲಾ ವಾಲಿಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ದ.ಕ ಜಿಲ್ಲಾ ವಾಲಿಬಾಲ್ ಅಶೋಸಿಯೇಶನ್ ಉಪಾಧ್ಯಕ್ಷ ಎಸ್ ಸಂಶುದ್ದಿನ್ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಈ ಪಂದ್ಯಾಟವು ಜನವರಿ 25 ರಿಂದ ಜನವರಿ 29 ರವರೆಗೆ ನಡೆಯಲಿದೆ.

ಉದ್ಘಾಟನಾ ಸಮಾರಂಭದಲ್ಲಿ ಚಾಮರಾಜ ವಿಧಾನಸಭಾ ಶಾಸಕ ಎಲ್ ನಾಗೇಂದ್ರ, ಮೈಸೂರು ಮೇಯರ್ ಶಿವಕುಮಾರ್, ಮೈಸೂರು ನಾಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಯಶಸ್ವಿನಿ ಸೋಮಶೇಖರ್, ಕರ್ನಾಟಕ ರಾಜ್ಯ ವಾಲಿಬಾಲ್ ಸಂಸ್ಥೆಯ ಕಾರ್ಯದರ್ಶಿ ಕೆ. ನಂದಕುಮಾರ್ ಸೇರಿದಂತೆ ಮುಖ್ಯ ಅತಿಥಿಗಳು, ಸಂಘಟಕರು, ಕ್ರೀಡಾಪಟುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!