ಕರಾವಳಿರಾಜಕೀಯ

ನಳಿನ್ ಕುಮಾರ್ ಕಟೀಲ್ ರನ್ನು ಜೋಕರ್ ಎಂದು ವ್ಯಂಗ್ಯವಾಡಿದ ಸಿದ್ದರಾಮಯ್ಯ



ಮಂಗಳೂರು: ‘ಈ ಕಟೀಲ್ ಇದ್ದಾರಲ್ಲ ಅವರು ಜೋಕರ್ ಇದ್ದ ಹಾಗೆ. ಅವರು ಬಹಳ ಬಾಲಿಶವಾಗಿ, ಬೇಜವಾಬ್ದಾರಿಯಿಂದ ಮಾತಾಡ್ತಾರೆ. ಭಾರತೀಯ ಜನತಾ ಪಾರ್ಟಿಯಲ್ಲಿ ಅವರು ವಿದೂಷಕ ಇದ್ದ ಹಾಗೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ವ್ಯಂಗ್ಯವಾಡಿದ್ದಾರೆ.

ಮಂಗಳೂರು ಹೊರವಲಯದ ಹರೇಕಳ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲು ಮಂಗಳೂರಿಗೆ ಆಗಮಿಸಿದ ಅವರು ಕುದ್ರೋಳಿ ದೇವಳಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.

ನಂತರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ನಾನು ಮುಖ್ಯಮಂತ್ರಿಗೆ ನಾಯಿಮರಿ ಅಂತ ಹೇಳಿಲ್ಲ. ಧೈರ್ಯವಿರಬೇಕು. ಧೈರ್ಯದಲ್ಲಿ ಕೇಂದ್ರ ಸರ್ಕಾರದ ಜೊತೆ ಮಾತನಾಡಬೇಕು.

ಅಲ್ಲಿಂದ ಅನುದಾನ ಬರೋದು ಕಡಿಮೆ ಆಗಿದೆ. ನಾಯಿಮರಿ ಥರ ಇರಬೇಡಿ ಅಂತ ಹೇಳಿದಷ್ಟೇ. ನಮಗೆ ಟಗರು, ಹುಲಿಯ ಅಂತಾರೆ ಹಾಗಂದ ಮಾತ್ರಕ್ಕೆ ನಾನು ಟಗರು ಆದ್ನಾ…?

ಯಡಿಯೂರಪ್ಪನವರನ್ನು ರಾಜಾಹುಲಿ ಅಂತಾರೆ. ಅದೂ ಅವರ ಪಕ್ಷದವರೇ ಕರೆಯೋದು. ಹಾಗಂದ ಮಾತ್ರಕ್ಕೆ ಯಡಿಯೂರಪ್ಪ ಹುಲಿನಾ…? ಇವರ ಸರ್ಕಾರದಲ್ಲಿ ಭ್ರಷ್ಟಾಚಾರ ಇಲ್ಲದೆ ಏನೂ ನಡೆಯೋದಿಲ್ಲ. ಎಲ್ಲದರಲ್ಲೂ ಲಂಚ ಲಂಚ’ ಎಂದು ಹೇಳಿದರು.

ಮತ್ತೆ ಮಾಧ್ಯಮದವರು ನಳಿನ್ ಕುಮಾರ್ ಕಟೀಲ್ ಬಗ್ಗೆ ಪ್ರಶ್ನೆ ಮಾಡಲು ಹೋದಾಗ ‘ಐ ಡು ನಾಟ್ ರಿಪ್ಲೈ ಟು ಮಿಸ್ಟರ್ ಕಟೀಲ್. ಬಿಕಾಸ್ ಹಿ ಇಸ್ ಜೋಕರ್ ಆಫ್ ಬಿಜೆಪಿ ಪಾರ್ಟಿ’ ಎಂದು ನುಡಿದಿದ್ದಾರೆ.

Leave a Reply

Your email address will not be published. Required fields are marked *

error: Content is protected !!