ಜಿಲ್ಲೆ

ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡು ಕೋಣ ತಿವಿದು ವ್ಯಕ್ತಿ ಸಾವು



ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಕಾಡುಕೋಣ ತಿವಿದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಚಿಕ್ಕಮಂಗಳೂರು ಕಳಸ ತಾಲೂಕಿನ ತೋಟದೂರಿನಲ್ಲಿ ನಡೆದಿದೆ.


ಮೃತ ಪಟ್ಟ ವ್ಯಕ್ತಿಯನ್ನು ಸೋಮಶೇಖರ್ ಎಂದು ತಿಳಿದುಬಂದಿದ್ದು ಇವರು ಕಳಸ ತಾಲೂಕಿನ ತೋಟದೂರಿನ ತಮ್ಮ ತೋಟದಲ್ಲಿ ಕೆಲಸ ಮಾಡುವಾಗ ಏಕಾಏಕಿ ದಾಳಿ ನಡೆಸಿದ ಕಾಡುಕೋಣ ತಿವಿದು ಹತ್ಯೆ ಮಾಡಿದೆ.

ಸೋಮಶೇಖರ್ ಅವರು ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಕಾಡುಕೋಣ ತಿವಿದ ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!