ಕರಾವಳಿ

ಪೆರ್ಲಂಪಾಡಿ: ಅಡಿಕೆ ತೆಗೆಯುತ್ತಿದ್ದ ವೇಳೆ ಬಿದ್ದು ವ್ಯಕ್ತಿ ದುರ್ಮರಣ



ಪುತ್ತೂರು: ಅಡಿಕೆ ತೆಗೆಯುತ್ತಿದ್ದ ವೇಳೆ ಅಡಿಕೆ ಮರ ತುಂಡಾದ ಪರಿಣಾಮ ವ್ಯಕ್ತಿಯೋರ್ವರು ಬಿದ್ದು ಮೃತಪಟ್ಟ ಘಟನೆ ಕೊಳ್ತಿಗೆ ಗ್ರಾಮದ ಕೊರ್ಬಂಡ್ಕದಿಂದ ವರದಿಯಾಗಿದೆ. ದೊಡ್ಡಮನೆ ನಿವಾಸಿ ಚಂದ್ರಶೇಖರ ಗೌಡ (54.ವ) ಮೃತಪಟ್ಟವರು.

ಡಿ.29 ರಂದು ತನ್ನ ಅಡಿಕೆ ತೋಟದಲ್ಲಿ ಅಡಿಕೆ ತೆಗೆಯಲೆಂದು ಮರ ಹತ್ತಿದ್ದ ಚಂದ್ರ ಶೇಖರ್ ಅವರು ಅಡಿಕೆ ಮರ ಅರ್ಧದಿಂದ ತುಂಡಾದ ಪರಿಣಾಮ ಮರ ಸಮೇತ ನೆಲಕ್ಕೆ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಳ್ಳಾರೆ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!