ಕ್ರೈಂರಾಜ್ಯ

ಕುಶಾಲನಗರ: ಗ್ರಾಮದೇವತೆ ಹಬ್ಬ ಆಚರಣೆಯಲ್ಲಿ ವಿದ್ಯುತ್ ಅವಘಡದಿಂದ ಶಿಕ್ಷಕ ಮೃತ್ಯು



ಮಡಿಕೇರಿ: ಕುಶಾಲನಗರ ಗ್ರಾಮ ದೇವತೆ ಹಬ್ಬ ಆಚರಣೆಯ ಸಂದರ್ಭ ಶಿಕ್ಷಕ್ಷರೊಬ್ಬರಿಗೆ ವಿದ್ಯುತ್ ಪ್ರವಹಿಸಿ ಮೃತಪಟ್ಟ ಘಟನೆ ನ.25ರಂದು ಸಂಜೆ ನಡೆದಿದೆ

ಹೆಬ್ಬಾಲೆ ಗ್ರಾಮದ ಮೊಗಣ್ಣ ಎಂಬುವರ ಪುತ್ರ ಪ್ರಾಥಮಿಕ ಶಾಲಾ ಶಿಕ್ಷಕ ಹೆಚ್.ಎಂ. ಗಿರೀಶ್(42) ಮೃತ ದುರ್ದೈವಿ.

ಹೆಬ್ಬಾಲೆಯ ಗ್ರಾಮದೇವತೆ ಶ್ರೀ ಬನಶಂಕರಿ ಅಮ್ಮನ ಉತ್ಸವದ ಹಿನ್ನಲೆಯಲ್ಲಿ ಮನೆಯನ್ನು‌ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.


ಮನೆಯ ಮಹಡಿಗೆ ತೆರಳಿದ ಶಿಕ್ಷಕನಿಗೆ ಆಕಸ್ಮಿಕವಾಗಿ ವಿದ್ಯುತ್ ವಯರ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!