ವಿಟ್ಲ: ಆಟೋ ಚಾಲಕನಿಗೆ ಹಲ್ಲೆ ಪ್ರಕರಣ- ಮೂವರ ವಿರುದ್ಧ ಪ್ರಕರಣ ದಾಖಲು
ವಿಟ್ಲ: ಬೋಳಂತೂರು ಗ್ರಾಮದ ಮದಕ ಎಂಬಲ್ಲಿ ಆಟೋ ಚಾಲಕನ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿ ಸಿ ಮೂವರು ಆರೋಪಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![](http://newsbites.in/wp-content/uploads/2022/11/IMG_20221116_122758-1024x608.jpg)
ನಾಲ್ಕು ವರ್ಷಗಳ ಹಿಂದಿನ ದ್ವೇಷವೇ ಈ ಘಟನೆಗೆ ಕಾರಣವೆನ್ನಲಾಗಿದೆ. ಬೋಳಂತೂರು ಗ್ರಾಮದ ನಾಡಾಜೆ ನಿವಾಸಿ, ಆಟೋ ಚಾಲಕ ಶಾಕೀರ್ ಹಲ್ಲೆಗೊಳಗಾಗಿ ಪೊಲೀಸರಿಗೆ ದೂರು ನೀಡಿದ್ದು, ಸಾದೀಕ್ ಯಾನೇ ಕುಂಡ ಮತ್ತು ಇತರ ಇಬ್ಬರು ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.
‘ನಾನು ರಾತ್ರಿ ರಿಕ್ಷಾದಲ್ಲಿ ಸ್ನೇಹಿತರಾದ ಹಾರೀಸ್, ಶಕೀರ್ ಕಲ್ಪನೆರವರೊಂದಿಗೆ ಪುಂಜಾಲಕಟ್ಟೆಯಲ್ಲಿ ನಡೆದ ಕಬ್ಬಡಿ ಮ್ಯಾಚ್ ಮುಗಿಸಿ ಕೊಕ್ಕಪುಣಿ ಎಂಬಲ್ಲಿ ಗೆಳೆಯರನ್ನು ಇಳಿಸಿ ನನ್ನ ಮನೆಯಾದ ನಾಡಾಜೆ ಕಡೆಗೆ ರಿಕ್ಷಾ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ, ಬೋಳಂತೂರು ಗ್ರಾಮದ ಮದಕ ಎಂಬಲ್ಲಿ ತಲುಪಿದಾಗ ಸಾದಿಕ್ ಅಲಿಯಾಸ್ ಕುಂಡ ಸಹಿತ ಮೂವರಿದ್ದ ತಂಡ ನನ್ನ ಮೇಲೆ ಹಲ್ಲೆ ನಡೆಸಿದೆ. ಘಟನೆಗೆ ಹಳೇ ದ್ವೇಷವೇ ಕಾರಣ’ ಎಂದು ಶಾಕೀರ್ರವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸಾದಿಕ್ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.