ಶಾಸಕ ಅಶೋಕ್ ರೈಗೆ ಸಚಿವ ಸ್ಥಾನ ಸಿಗಲು ದರ್ಗಾದಲ್ಲಿ ಪ್ರಾರ್ಥನೆ ನಡೆಸಿದ ಅದ್ದು ಪಡೀಲ್
ಪುತ್ತೂರು: ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈಯವರು ಕ್ಯಾಬಿನೆಟ್ ಸಚಿವರಾಗಿ ದಕ ಜಿಲ್ಲೆಯ ಉಸ್ತುವಾರಿ ಮಂತ್ರಿಯಾಗಿ ಆಯ್ಕೆಯಾಗಲಿ ಎಂದು ಕಾಂಗ್ರೆಸ್ ಮುಖಂಡ ಅದ್ದು ಪಡೀಲ್ ಅವರು ಪುತ್ತೂರು ಜುಮಾ ಮಸೀದಿಯ ಮಖಾಂನಲ್ಲಿ ಪ್ರಾರ್ಥನೆ ನೆರವೇರಿಸಿದರು.

ಅಶೋಕ್ ರೈಯವರಿಗೆ ಸಚಿವ ಸ್ಥಾನ ಸಿಕ್ಕಿದರೆ ಶುಕ್ರವಾರದ ಜುಮಾ ನಮಾಝ್ ದಿನ ಅದೇ ಮಸೀದಿಯ ಆವರಣದಲ್ಲಿ ಒಂದು ಸಾವಿರಕ್ಕೂ ಅಧಿಕ ಮಂದಿಗೆ ಅನ್ನದಾನ ಮಾಡುವುದಾಗಿ ಹರಕೆ ಹೇಳಿರುವುದಾಗಿ ಅದ್ದು ಪಡೀಲ್ ತಿಳಿಸಿದ್ದಾರೆ.






