ಕರಾವಳಿ

ಸೇಡಿಯಾಪು-ಕೆದಿಮಾರ್ ರಸ್ತೆ: 25 ವರ್ಷಗಳ ವಿವಾದ ಇತ್ಯರ್ಥಪಡಿಸಿದ ಶಾಸಕ ಅಶೋಕ್ ರೈ

ಪುತ್ತೂರು: ಪಡ್ನೂರು ಗ್ರಾಮದ ಸೇಡಿಯಾಪು ಕೆದಿಮಾರ್ ರಸ್ತೆಗೆ ಕೊನೆಗೂ‌ಮುಕ್ತಿ ದೊರಕಿದೆ. ರಸ್ತೆ ವಿವಾದದಿಂದ‌ ಇಲ್ಲಿನ ಸುಮಾರು ಕುಟುಂಬಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದರು. ಈ ವಿಚಾರವನ್ನು ಶಾಸಕ ಅಶೋಕ್ ರೈ ಗಮನಕ್ಕೆ ತಂದ ಗ್ರಾಮಸ್ಥರು ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಿದ್ದರು.


ವಿವಾದಯುತ ರಸ್ತೆಯ ವಿಚಾರವಾಗಿ ಮಾತುಕತೆ ನಡೆಸಿದ ಶಾಸಕರು ರಸ್ತೆ ವಿವಾದಕ್ಕೆ ತೆರೆ ಎಳೆದಿದ್ದಾರೆ. ಈ ಮೂಲಕ 25 ವರ್ಷಗಳ ನರಕಯಾತನೆಗೆ ಮುಕ್ತಿ ನೀಡಿದ್ದಾರೆ.
ರಸ್ತೆ ಮಾಡಿಸಿಕೊಟ್ಟ ಶಾಸಕ ಅಶೋಕ್ ರೈ ಅವರನ್ನು ಗ್ರಾಮಸ್ಥರು ಅಭಿನಂದಿಸಿದ್ದಾರೆ. ಈ ವೇಳೆ ಮಾತನಾಡಿದ ಗ್ರಾಮಸ್ಥರು ನೀವು ಮಾಡಿದ ಉಪಕಾರವನ್ನು ಎಂದಿಗೂ ಮರೆಯಲಾರೆವು, ದೇವರ ರೂಪದಲ್ಲಿ ಬಂದು ನಮ್ಮ ಕಷ್ಟಕ್ಕೆ ಪರಿಹಾರ ನೀಡಿದ್ದೀರಿ ಎಂದು ಅಭಿನಂದಿಸಿದರು.

ಸ್ಥಳೀಯರ ಪರವಾಗಿ ಮಾತನಾಡಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್  ಮಾತನಾಡಿ ಈ ಭಾಗದ ಜನರು ಅನೇಕ ವರ್ಷಗಳಿಂದ ಗ್ರಾ.ಪಂಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಯಾರೂ ಕ್ಯಾರೇ ಮಾಡಿರಲಿಲ್ಲ. ಶಾಸಕರು ಮಾತುಕತೆ ಮೂಲಕ ಸಮಸ್ಯೆಗೆ ಇತಿಶ್ರೀ ಹಾಡಿದ್ದಾರೆ. ಶಾಸಕರು ಇಲ್ಲದೇ ಇರುತ್ತಿದ್ದರೆ ಈ ರಸ್ತೆಯೇ ಆಗುತ್ತಿರಲಿಲ್ಲ. ಬಡ ಜನತೆಯ ಕಣ್ಣೀರೊರೆಸಿದ ಶಾಸಕರನ್ನು ಜನತೆ ಎಂದೂ ಮರೆಯಬಾರದು ಎಂದು ಹೇಳಿದರು.


ಈ ರಸ್ತೆಯನ್ನು ಕಾಂಕ್ರೀಟ್ ಮಾಡಿಕೊಡುವುದಾಗಿ ಶಾಸಕರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ
ಬಾಳಪ್ಪ ಗೌಡ, ಪುಷ್ಪಾವತಿ,ವಿಶ್ವಾಸ್ ನಂದೀಸ್, ಮನೋಜ್ ,ದೇವಕಿ, ಪ್ರೇಮ,ಪುರುಷೋತ್ತಮ ಕುಲಾಲ್, ವಿಧ್ವಪ್ರಸಾದ್, ತುಶಾನ್, ಶೀನಪ್ಪ ಪೂಜಾರಿ, ಗಂಗಾಧರ ಕಡ್ತಿಮಾರ್, ರೋಜನ್ ರಾಜ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!