ಉಡುಪಿ: ಎಕೆಎಂಎಸ್ ಸಾರಿಗೆ ಸಂಸ್ಥೆಯ ಮಾಲೀಕ ಸೈಫುದ್ದೀನ್ ಬರ್ಬರ ಹತ್ಯೆ
ಉಡುಪಿ: ಕರಾವಳಿಯ ಹೆಸರಾಂತ ಎಕೆಎಂಎಸ್ ಸಾರಿಗೆ ಸಂಸ್ಥೆಯ ಮಾಲೀಕ, ಉಡುಪಿ ಆತ್ರಾಡಿಯ ಉದ್ಯಮಿ ಸೈಫುದ್ದೀನ್ ಅವರನ್ನು ಸೆ.27ರಂದು ಬೆಳಗ್ಗೆ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಮಲ್ಪೆ- ಕೊಡವೂರು ರಸ್ತೆ ಪ್ರದೇಶದಲ್ಲಿ ಘಟನೆ ನಡೆದಿದೆ. ಘಟನೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಸೈಫುದ್ದೀನ್ ಅವರ ಮನೆಗೆ ನುಗ್ಗಿದ ಆರೋಪಿಗಳು ಕಡಿದು ಕೊಂದಿದ್ದಾರೆ ಎನ್ನಲಾಗುತ್ತಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.