ಧರ್ಮಸ್ಥಳ ಪ್ರಕರಣ: “ಸತ್ಯಮೇವ ಜಯತೆ, ಗಾಡ್ ಇಸ್ ಗ್ರೇಟ್” ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿದ ಸುಜಾತ ಭಟ್ ಪರ ವಕೀಲ
ಮಂಗಳೂರು: ಧರ್ಮಸ್ಥಳ ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ಪನ ಕಾರ್ಯದ 3ನೇ ದಿನವಾದ ಗುರುವಾರ, ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ ಅವರ ತಾಯಿ ಸುಜಾತ ಭಟ್ ಅವರ ಪರ ವಕೀಲರಾದ ಮಂಜುನಾಥ್ ಎನ್ ಅವರು “ಸತ್ಯಕ್ಕೇ ಜಯ ಸತ್ಯಮೇವ ಜಯತೆ, ಗಾಡ್ ಇಸ್ ಗ್ರೇಟ್” ಎಂದು ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿದ್ದಾರೆ.

ಸಾಕ್ಷಿ ದೂರುದಾರನೊಂದಿಗೆ ಎಸ್ಐಟಿಯ ಕಾರ್ಯಾಚರಣೆಯ ನಾಲ್ಕನೇ ದಿನ ತಲುಪಿದೆ. ಸಾಕ್ಷಿಯು ಗುರುತುಪಡಿಸಿರುವ 13 ಸ್ಥಳಗಳಲ್ಲೂ ಉತ್ಪನನ ಕಾರ್ಯ ನಡೆಯಲಿದೆ.



