ಬೆಳ್ತಂಗಡಿ: ಒಳಿತಿನಲ್ಲಿ ಒಟ್ಟು ಸೇರೋಣ ಮಾದಕ ದ್ರವ್ಯವನ್ನು ಸೋಲಿಸೋಣ ಕಾರ್ಯಕ್ರಮ
ಬೆಳ್ತಂಗಡಿ:ನೂರುಲ್ ಹುದಾ ಮದರಸ ಮುರ ನಾವೂರು
ಒಳಿತಿನಲ್ಲಿ ಒಟ್ಟು ಸೇರೋಣ ಮಾದಕ ದ್ರವ್ಯವನ್ನು ಸೋಲಿಸೋಣ ಎಂಬ ಧ್ಯೇಯ ವಾಕ್ಯದೊಂದಿಗೆ SJM ಮುರ ರೇಂಜ್ ಇದರ ಕೇಂದ್ರ ಮದ್ರಸವಾದ ನೂರುಲ್ ಹುದಾ ಮದರಸ ಮುರ SBS ವತಿಯಿಂದ ಮಾದಕ ದ್ರವ್ಯ ವಿರುದ್ಧದ ಅಭಿಯಾನ ಹಾಗೂ ಸ್ನೇಹ ಸಹವಾಸ ಶಿಬಿರವು ಇಸ್ಲಾಮಿಕ್ ಎಜುಕೇಶನ್ ಬೋರ್ಡ್ ಆಫ್ ಇಂಡಿಯಾ ಇದರ ನಿರ್ದೇಶನಂತೆ ಮೇ.25ರಂದು ಮುರ ಮದರಸ ಹಾಲಿನಲ್ಲಿ ನಡೆಯಿತು.

ಇಸ್ತಿರಾಹ ಎಂಬ ಕಾರ್ಯಕ್ರಮಕ್ಕೆ ಸ್ಥಳೀಯ ಖತೀಬರಾದ ಬಶೀರ್ ಸಅದಿ ಮುರ ಚಾಲನೆ ನೀಡಿದರು. ಎಸ್.ಬಿ.ಎಸ್ ಉಪಾಧ್ಯಕ್ಷ ಮುಹಮ್ಮದ್ ಜಹ್ ಫರ್ ರವರ ಖಿರಾಅತ್ ಪಾರಾಯಣದೂಂದಿಗೆ ಸದರ್ ಉಸ್ತಾದರಾದ ಅಬ್ದುಲ್ ಹಮೀದ್ ಝಹ್ರಿ ಅಲ್ಲಾಹನ ನಾಮದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಹ ಅಧ್ಯಾಪಕರಾದ ಖಾಲಿದ್ ಮದನಿ ಲಹರಿಯ ದುಷ್ಪರಿಣಾಮದ ಕುರಿತು ತರಗತಿ ನಡೆಸಿದರು.
ನಿರಿಂದಿ ಮದರಸ ಸದರ್ ಉಸ್ತಾದರಾದ ಅಬೂಬಕ್ಕರ್ ಸಿದ್ದೀಕ್ ಸಖಾಫಿ ಆದರ್ಶ ಸಮ್ಮೇಳನ ಎಂಬ ವಿಷಯದ ಕುರಿತು ಸವಿಸ್ತಾರವಾಗಿ ಬೋಧಿಸಿದರು. ಎಸ್ .ಬಿ.ಎಸ್.ಕಾರ್ಯದರ್ಶಿ ಮುಬಶ್ಶಿರ್ ಶಾ ಕಮಾಲ್ ಮಾದಕ ದ್ರವ್ಯ ದ ಕುರಿತು ಭಾಷಣ ಮಾಡಿದರು. ಎತ್ತರಕ್ಕೆ ಹಾರೋಣ ಎಂಬ ಕಾರ್ಯಕ್ರಮಕ್ಕೆ ಸಹ ಅದ್ಯಾಪಕರಾದ ಅಮೀರ್ ಸಅದಿ ಯವರು ನೇತೃತ್ವ ನೀಡಿದರು.

ನಂತರ ಕ್ರಾಂತಿ ಗೀತೆಯು ಎಸ್ ಯಸ್.ಬಿ.ಎಸ್ ಅಧ್ಯಕ್ಷ ಮುಹಮ್ಮದ್ ಫೈಝಲ್ ರವರ ನೇತೃತ್ವದಲ್ಲಿ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಬಶೀರ್ ಸಅದಿ ಆತ್ಮೀಯ ಮಜ್ಲಿಸ್, ಬುರ್ದಾ ಖುರ್ ಆನ್ ಪಾರಾಯಣ, ಸ್ವಲಾತ್, ದಿಕ್ರ್ ಹಾಗೂ ದುಆ ಮಜ್ಲಿಸ್ ಗೆ ನೇತೃತ್ವ ವಹಿಸಿದರು.
ಎಸ್.ಬಿ.ಎಸ್. ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಸ್ವಾಗತಿಸಿ ಜೊ. ಕಾರ್ಯದರ್ಶಿ ಮುಹಮ್ಮದ್ ಶೈಮ್ ದನ್ಯವಾದ ಸಲ್ಲಿಸಿದರು. ಮುರ ಮದ್ರಸದ ಎಲ್ಲಾ ವಿಧ್ಯಾರ್ಥಿಗಳು ಹಾಗೂ ಇದರ ಅಧೀನದಲ್ಲಿರುವ ಅಲ್ -ಖಿಲ್ರಿಯಾ ನಿರಿಂದಿ ಮದ್ರಸದ ಎಲ್ಲಾ ವಿಧ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.SBS ವತಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೂ ಉಪಹಾರ ನೀಡಲಾಯಿತು. MJM ಮುರ ನಾವೂರು ಆಡಳಿತ ಸಮಿತಿಯ ಸಹಕಾರದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.