ಜಂಇಯ್ಯತುಲ್ ಮುಅಲ್ಲಿಮೀನ್ ಚಿಕ್ಕಮಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ: ಪದಾಧಿಕಾರಿಗಳ ಆಯ್ಕೆ
ಮೂಡಿಗೆರೆ: ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಚಿಕ್ಕಮಗಳೂರಿನ ಜಿಲ್ಲಾ ಸಮಿತಿಯ ವಾರ್ಷಿಕ ಸಭೆಯನು ಸುಲೈಮಾನ್ ಮುಸ್ಲಿಯಾರ್ ಉದ್ಘಾಟಿಸಿದರು.
ಮುಫತ್ತಿಶ್ ಫಾರೂಖ್ ದಾರಿಮಿ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ವಾರ್ಷಿಕ ಖರ್ಚು ವೆಚ್ಚಗಳ ವರದಿಯನ್ನು ಪ್ರಧಾನ ಕಾರ್ಯದರ್ಶಿಗಳಾದ ಬದ್ರುದ್ದೀನ್ ದಾರಿಮಿ ಮಂಡಿಸಿದರು. ಮುಸ್ತಫಾ ಯಮಾನಿ ಮಾತನಾಡಿದರು.

2025 26ನೇ ಸಾಲಿನ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮುಸ್ತಫಾ ಯಮಾನಿ, ಉಪಾಧ್ಯಕ್ಷರಾಗಿ ಸಿದ್ದೀಖ್ ದಾರಿಮಿ ಶರೀಫ್ ಅರ್ಶದಿ,
ಪ್ರಧಾನ ಕಾರ್ಯದರ್ಶಿಯಾಗಿ ಬದ್ರುದ್ದೀನ್ ದಾರಿಮಿ ಆಯ್ಕೆಯಾದರು. ನಿಸಾಮುದ್ದೀನ್ ಫೈಸಿ, ಸದ್ದಾಂ ಹುಸೈನ್ ಫೈಸಿ (ಕಾರ್ಯದರ್ಶಿಗಳು) ಸುಲೈಮಾನ್ ಮುಸ್ಲಿಯಾರ್ (ಕೋಶಾಧಿಕಾರಿ) ಎಸ್ ಕೆ ಎಸ್ ಬಿ ವಿ ಕನ್ವೀನರಾಗಿ ಸಿನಾನ್ ಫೈಝಿ ಆಯ್ಕೆಯಾದರು