ಕರಾವಳಿಕ್ರೈಂರಾಜ್ಯ

ಸುಹಾಸ್ ಶೆಟ್ಟಿ ಹತ್ಯೆ: NIA ತನಿಖೆಗೆ ವಿಜಯೇಂದ್ರ ಆಗ್ರಹ

ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಬಹಳ ಗಂಭೀರ ವಿಚಾರವಾಗಿದ್ದು ಪೋಲೀಸರ ವೈಫಲ್ಯವೂ ಗೋಚರಿಸುತ್ತಿದೆ, ರಾಜ್ಯ ಕಾಂಗ್ರೆಸ್ ಸರಕಾರದ ನೀತಿಗಳೂ ಈ ರೀತಿಯ ಹತ್ಯೆಗೆ ಕಾರಣವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

ಇಂತಹ ಘಟನೆ ನಡೆದಾಗ ರಾಜ್ಯ ಸರಕಾರ ಯಾವತ್ತೂ ಹಿಂದೂ ಕಾರ್ಯಕರ್ತರ ಪರ ನಿಂತಿಲ್ಲ, ರಾಜ್ಯ ಸರಕಾರದ ವಿಶ್ವಾಸವೇ ಜನತೆಗೆ ಹೋಗಿದ್ದು ಈ ವಿಚಾರದಲ್ಲಾದರೂ ನ್ಯಾಯ ಒದಗಿಸಲುಸರಕಾರ ಮುಂದಾಗಬೇಕು ಎಂದು ಅವರು ಹೇಳಿದರು.

ಘಟನೆ ಕುರಿತು ರಾಷ್ಟೀಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದ ಅವರು ರಾಜ್ಯ ಸರಕಾರಕ್ಕೆ ಏನಾದ್ರೂ ಮನುಷ್ಯತ್ವ ಇದ್ದರೆ ಸುಹಾಸ್ ಶೆಟ್ಟಿ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

Leave a Reply

Your email address will not be published. Required fields are marked *

error: Content is protected !!