ಕರಾವಳಿ

ಸಂಪಾಜೆ:  ವಾಹನ ಡಿಕ್ಕಿ ಹೊಡೆದು  ಕಾಡು ಹಂದಿ ಸಾವು

ಸುಳ್ಯ’ ಕಾಡು ಹಂದಿಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಕಾಡು ಹಂದಿ ಮೃತಪಟ್ಟ ಘಟನೆ ದ.ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಕಡೆಪಾಲದಲ್ಲಿ ನ‌.26ರಂದು ರಾತ್ರಿ ಸಂಭವಿಸಿದೆ.

ಕಾಡುಹಂದಿ ರಾತ್ರಿ ರಸ್ತೆದಾಟುತ್ತಿದ್ದ ಸಂದರ್ಭದಲ್ಲಿ ವಾಹನವೊಂದು ಢಿಕ್ಕಿ ಹೊಡೆದಿದ್ದು, ನ.27ರಂದು ಮುಂಜಾನೆ ಸ್ಥಳೀಯರೊಬ್ಬರು ವಾಕಿಂಗ್ ಹೋಗುವ ಸಂದರ್ಭದಲ್ಲಿ ರಸ್ತೆಯಲ್ಲಿ ರಕ್ತದ ಗುರುತು ನೋಡಿ , ರಸ್ತೆ ಬದಿಯ ಚರಂಡಿಯಲ್ಲಿ ನೋಡಿದಾಗ ಹಂದಿ ಸತ್ತು ಬಿದ್ದಿರುವುದನ್ನು ಕಂಡಿದೆ. ಕೂಡಲೇ ಅವರು ಸಂಪಾಜೆ ಅರಣ್ಯ ಇಲಾಖೆಯವರಿಗೆ ತಿಳಿಸಿದ್ದು, ಅರಣ್ಯ ಇಲಾಖಾ ಸಿಬ್ಬಂದಿ ಹಾಗೂ ಸ್ಥಳೀಯರು ಸ್ಥಳಕ್ಕೆ ಬಂದಿರುವುದಾಗಿ ತಿಳಿದುಬಂದಿದೆ. ಹಂದಿಗೆ ಢಿಕ್ಕಿ ಹೊಡೆದ ವಾಹನ ಯಾವುದೆಂದು ತಿಳಿದುಬಂದಿಲ್ಲ.

Leave a Reply

Your email address will not be published. Required fields are marked *

error: Content is protected !!