ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷರಾಗಿ ಅಶ್ರಫ್ ಕಲ್ಲೇಗ ಪುನರಾಯ್ಕೆ
ಪುತ್ತೂರು: ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಇದರ ಮಹಾಸಭೆ ಮುರ ಎಂಪಿಎಂ ಸಭಾಂಗಣದಲ್ಲಿ ನಡೆಯಿತು. ಯುವಜನ ಪರಿಷತ್ ರಾಜ್ಯ ಸಂಚಾಲಕರಾದ ನ್ಯಾಯವಾದಿ ಎಂ.ಪಿ ಅಬೂಬಕ್ಕರ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಅಶ್ರಫ್ ಕಲ್ಲೇಗ ಪುನರಾಯ್ಕೆಗೊಂಡರು. ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಬಾವು ಪಡೀಲ್, ಉಪಾಧ್ಯಕ್ಷರುಗಳಾಗಿ ಇಬ್ರಾಹಿಂ ಸಾಗರ್, ಮೂಸಾ ಮಾಣಿ ಹಾಗೂ ಶರೀಫ್ ಸಾಲ್ಮರ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಬಶೀರ್ ಪರ್ಲಡ್ಕ, ನೌಶಾದ್ ಬೊಳ್ವಾರು ಹಾಗೂ ಶರೀಫ್ ಮುಕ್ರಂಪಾಡಿ, ಕೋಶಾಧಿಕಾರಿಯಾಗಿ ಅಡ್ವೊಕೇಟ್ ಶಾಕಿರ್ ಹಾಜಿ ಮಿತ್ತೂರು ಆಯ್ಕೆಯಾದರು. ಸಂಘಟನಾ ಕಾರ್ಯದರ್ಶಿಯಾಗಿ ಜುನೈದ್ ಸಾಲ್ಮರ, ಸೂಫಿ ಬಪ್ಪಳಿಗೆ, ರಫೀಕ್ ಬಾಂಬೆ, ಹಸೈನಾರ್ ಬನಾರಿ, ಯೂಸುಫ್ ತಾರಿಗುಡ್ಡೆ, ಹಮೀದ್ ಸೋಂಪಾಡಿ, ಇಬ್ರಾಹಿಂ ಪುತ್ತುಸೇಟ್, ಪತ್ರಿಕಾ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಮುಲಾರ್ರವರನ್ನು ಆಯ್ಕೆ ಮಾಡಲಾಯಿತು. ಸಂಚಾಲಕರಾಗಿ ಖಾಸಿಂ ಹಾಜಿ ಮಿತ್ತೂರು, ನ್ಯಾಯವಾದಿ ನೂರುದ್ದೀನ್ ಸಾಲ್ಮರ ಆಯ್ಕೆಯಾದರು. ಕಾನೂನು ಸಲಹೆಗಾರರಾಗಿ ಕೆ.ಎಂ ಸಿದ್ದೀಕ್ ಆಯ್ಕೆಯಾದರು. ಸಮಿತಿ ಸದಸ್ಯರಾಗಿ ಇಸ್ಮಾಯಿಲ್ ಬಪ್ಪಳಿಗೆ, ರಶೀದ್ ಮುರ, ಹಮೀದ್ ಮೌಲ ಕಬಕ, ಆದಂ ಕೆದುವಡ್ಕ, ಅಲ್ತಾಫ್ ಬೆಟ್ಟಂಪಾಡಿ, ಇಸ್ಮಾಯಿಲ್ ಸಾಲ್ಮರ, ಅಬ್ದುಲ್ ಹಮೀದ್ ಸಾಲ್ಮರ, ಸಿದ್ದೀಕ್ ಕಲ್ಲೇಗ, ಉನೈಸ್ ಕಬಕ, ಬಾತಿಷ ವಳತ್ತಡ್ಕ ಹಾಗೂ ಶರೀಫ್ ಮುಕ್ರಂಪಾಡಿ ಆಯ್ಕೆಯಾಗಿದ್ದಾರೆ.