ಕರಾವಳಿಕ್ರೈಂ

ವಿಟ್ಲ: ಮನೆಗೆ ನುಗ್ಗಿ ಬೆಲೆ ಬಾಳುವ ವಸ್ತುಗಳನ್ನು ಕದ್ದೊಯ್ದ ಕಳ್ಳರು

ವಿಟ್ಲ: ಮನೆಗೆ ನುಗ್ಗಿದ ಕಳ್ಳರು ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿರುವ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರೋಪಾಡಿ ನಿವಾಸಿ, ಪ್ರಸ್ತುತ ಮೈಸೂರಿನಲ್ಲಿರುವ ಡಾ. ಬಿ. ಕೃಷ್ಣರಾಜ್ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ಕೃಷ್ಣರಾಜ್ ರವರ ಪ್ರಸ್ತುತ ಮೈಸೂರಿನಲ್ಲಿ ಕುಟುಂಬ ಸಮೇತರಾಗಿ ವಾಸಮಾಡಿಕೊಂಡಿದ್ದು, ಪಿತ್ರಾರ್ಜಿತವಾಗಿ ಬಂದ ಕೃಷಿ ಭೂಮಿ ಮತ್ತು ಮನೆ ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಬೇತ ಎಂಬಲ್ಲಿ ಇದ್ದು, ಸಂಕಪ್ಪ ಶೆಟ್ಟಿ ಎಂಬವರು ನೋಡಿಕೊಳ್ಳುತ್ತಿದ್ದಾರೆ.

ಸೆ.29 ರಂದು ಸಂಜೆ ಕೃಷ್ಣರಾಜ್ ರವರಿಗೆ ಸಂಕಪ್ಪ ಶೆಟ್ಟಿ ರವರು ದೂರವಾಣಿ ಮೂಲಕ ಕರೆಮಾಡಿ ದಿನಾಂಕ 25.09.2024 ರಿಂದ 28.09.2024 ರ ಮಧ್ಯೆ ಮನೆಯಲ್ಲಿ ಕಳ್ಳತನವಾದ ಬಗ್ಗೆ ತಿಳಿಸಿದ್ದು, ಸೆ.30 ರಂದು ಮೈಸೂರಿನಿಂದ ಕರೋಪಾಡಿ ಗ್ರಾಮದ ಬೇತ ಎಂಬಲ್ಲಿಗೆ ಬಂದು ನೋಡಿದಾಗ ಮನೆಯ ಮೇಲ್ಚಾವಣಿಯ ಹಂಚುಗಳನ್ನು ತೆಗೆದು ಮನೆಯೊಳಗೆ ಇಳಿದು ಬೆಲೆಬಾಳುವ ತಾಮ್ರ, ಹಿತ್ತಾಳೆ ,ಕಂಚು, ಬೆಳ್ಳಿ ಗ್ಲಾಸ್, ಪಾತ್ರೆ, ಬಿಂದಿಗೆ, ಹಂಡೆ, ಮುಂತಾದ ಸುಮಾರು 62200/- ಮೊತ್ತದ ವಸ್ತುಗಳನ್ನು ಕಳವು ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!