ಕರಾವಳಿರಾಜಕೀಯ

ಸವಣೂರು: ಎಸ್.ಡಿ.ಪಿ.ಐ 16ನೇ ಸಂಸ್ಥಾಪನಾ ದಿನಾಚರಣ

ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ
ಸುಳ್ಯ ವಿಧಾನಸಭಾ ಕ್ಷೇತ್ರದ
ಸವಣೂರು ಗ್ರಾಮ ಸಮಿತಿ ವತಿಯಿಂದ 16ನೇ ಸಂಸ್ಥಾಪನಾ ದಿನದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವು ಜೂನ್ 21ರಂದು ಸವಣೂರಿನಲ್ಲಿ ನಡೆಯಿತು.

ಗ್ರಾಮ ಸಮಿತಿಯ ಅಧ್ಯಕ್ಷರಾದ ಹನೀಫ್ ಅತ್ತಿಕೆರೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಡಲ್ಲಿ
ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಉಪಾಧ್ಯಕ್ಷರು, ಸವಣೂರು ಗ್ರಾಮ ಪಂಚಾಯತಿನ ಸದಸ್ಯರು ಆದ ಬಾಬು ಎಸ್ ಸವನೂರು ರವರು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು. ವಿಧಾನಸಭಾ ಕ್ಷೇತ್ರ ಸಮಿತಿಯ ಸದಸ್ಯರು, ಸವಣೂರು ಗ್ರಾಮ ಪಂಚಾಯತ್ ಸದಸ್ಯರು ಆದ ರಫೀಕ್ ಎಂ ಎ. ರವರು ಸಂದೇಶ ಭಾಷಣ ಮಾಡಿದರು.


ಶಾಂತಿನಗರ ಬೂತ್ ಸಮಿತಿಯ ಅಧ್ಯಕ್ಷರಾದ
ಅಶ್ರಫ್ ಜನತಾ ರವರು ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದ ಅತಿಥಿ ಗಳಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
ಸವಣೂರು ಗ್ರಾಮ ಸಮಿತಿಯ
ಪ್ರಧಾನ ಕಾರ್ಯದರ್ಶಿಯವರಾದ ರಫೀಕ್ ಪಲ್ಲತ್ತ ಮೂಲೆ, ಕೋಶಾಧಿಕಾರಿಯವರಾದ ಯೂಸಫ್ ಹಾಜಿ ಬೇರಿಕೆ, ರಹ್ಮಾನಿಯಾ ಜುಮ್ಮಾ ಮಸ್ಜಿದ್ ಪಣೆಮಜಲು ಪ್ರಧಾನ ಕಾರ್ಯದರ್ಶಿಯವರಾದ
ಹಂಸ ಸರ್ವೆ, ಊರಿನ ಗಣ್ಯರಾದ, ಕಾಸಿಂ ಊರ್ಸಾಗ್, ರಜಾಕ್ ಬೊಂಬಾಯಿ, ಮಹಮ್ಮದ್ ಎಂ ಎಸ್. ಮತ್ತು ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

.

Leave a Reply

Your email address will not be published. Required fields are marked *

error: Content is protected !!