ಕರಾವಳಿಕ್ರೈಂ

ಬೆಳ್ತಂಗಡಿ: ವ್ಯಕ್ತಿಗೆ ಹಲ್ಲೆ-ಸಾವು



ಬೆಳ್ತಂಗಡಿ: ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯೋರ್ವರಿಗೆ ಹಲ್ಲೆ ನಡೆಸಿದ ಪರಿಣಾಮ ವ್ಯಕ್ತಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಮೃತರ ಪತ್ನಿ ಪೊಲೀಸ್ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಸಾಂದರ್ಭಿಕ ಚಿತ್ರ

ಪ್ರಕರಣದ ಪಿರ್ಯಾದಿದಾರರಾದ  ಬೆಳ್ತಂಗಡಿ ತಾಲ್ಲೂಕಿನ ಪಟ್ರಮೆ ಗ್ರಾಮದ ನಿವಾಸಿ ನಿವಾಸಿ ಭಾರತಿ (46) ಎಂಬವರು ದೂರು ನೀಡಿದ್ದು ನನ್ನ ಗಂಡ ಕೃಷ್ಣಪ್ಪ ಎಂಬವರಿಗೆ ಅನಾರೋಗ್ಯದ ಕಾರಣ ಮೇ 12ರಂದು ಪುತ್ತೂರು ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಂಡು ಮೇ 13ರಂದು ವಾಪಾಸ್ ಕೊಕ್ಕಡಕ್ಕೆ ಬಂದಿರುತ್ತಾರೆ. ಅದೇ ದಿನ ರಾತ್ರಿ ಕೃಷ್ಣಪ್ಪರವರು ಕೊಕ್ಕಡ ಜಂಕ್ಷನ್ ಬಳಿ ನಿಂತಿದ್ದಾಗ, ಕೊಕ್ಕಡದ ಪಶು ವೈದ್ಯರಾದ ಕುಮಾರ್‌ ಎಂಬುವವರು ಯಾವುದೋ ಕ್ಷುಲ್ಲಕ ವಿಚಾರಕ್ಕೆ ಕೃಷ್ಣಪ್ಪರವರಿಗೆ ಕೈಯಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆಯ ಪರಿಣಾಮ ಕೃಷ್ಣಪ್ಪರವರು ಬಿದ್ದು ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಭಾರತಿ ಅವರು ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!