ಕರಾವಳಿರಾಜಕೀಯ

ತಿನ್ನಲು ಮೇವು ಇಲ್ಲದೇ ಕೊಯಿಲ ಗೋ ಶಾಲೆಯಲ್ಲಿ 6 ಹಸುಗಳ ಸಾವು..!? ಸರಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಅಶೋಕ್ ರೈ



ಕಡಬ ತಾಲೂಕಿನ ಕೊಯಿಲದಲ್ಲಿರುವ ಗೋ ಶಾಲೆಯಲ್ಲಿ 6 ಹಸುಗಳು ಸಾವಿಗೀಡಾಗಿದ್ದು ಗೋವುಗಳನ್ನು ಆರಾಧನೆ ಮಾಡುವ ನಮ್ಮ ನೆಲದಲ್ಲಿರುವ ಗೋ ಶಾಲೆಗಳು ಮುಚ್ಚಿ ಹೋಗುವ ಸ್ಥಿತಿ ನಿರ್ಮಾಣ ಆಗಿದೆ. ಸರಕಾರ ಈ ಬಗ್ಗೆ ಗಂಭೀರವಾಗಿ ಗಮನ ಹರಿಸುವ ಅಗತ್ಯವಿದೆ ಎಂದು ಕಾಂಗ್ರೆಸ್ ಮುಖಂಡ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಹೇಳಿದ್ದಾರೆ.

ಮಾಣಿ ಪೆರಾಜೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಶ್ರೀ ರಾಘವೇಶ್ವರ ಭಾರತಿ ಮಹಾ ಸ್ವಾಮೀಜಿ ಅವರಿಂದಾಗಿ ಮನೆ ಮನೆಗಳಲ್ಲಿ ಇಂದು ಗೋವಿಗೆ ಪ್ರಾಮುಖ್ಯತೆ ಬಂದಿದೆ. ಎಲ್ಲವನ್ನೂ ಸ್ವಾಮೀಜಿಗಳು ಮಾಡಲು ಸಾಧ್ಯವಿಲ್ಲ, ಸರಕಾರ ಇದರ ಬಗ್ಗೆ ಗಮನ ಕೊಡಬೇಕು ಎಂದು ಅವರು ಹೇಳಿದರು.


ಕೊಯಿಲದ ಗೋಶಾಲೆಯಲ್ಲಿ 700ರಷ್ಟು ಹಸುಗಳಿದ್ದು ಇದರಲ್ಲಿ 6 ಹಸುಗಳು ತಿನ್ನಲು ಮೇವು ಇಲ್ಲದೇ ಸಾವನ್ನಪ್ಪಿದೆ. ನಾವು ಆರಾಧನೆ ಮಾಡುವ ಹಸುಗಳು ಮೇವು ಇಲ್ಲದೇ ಸಾವನ್ನಪ್ಪುತ್ತಿದೆ ಎಂದರೆ ಪ್ರಮುಖರು, ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇದೆ ಎಂದು ಅಶೋಕ್ ಕುಮಾರ್ ರೈ ಹೇಳಿದರು

Leave a Reply

Your email address will not be published. Required fields are marked *

error: Content is protected !!