ಕರಾವಳಿಕ್ರೈಂ

ಕುರಿಯ: ನವ ವಿವಾಹಿತೆ ಆತ್ಮಹತ್ಯೆ



ಪುತ್ತೂರು: ಕುರಿಯ ಗ್ರಾಮದ ಗಡಾಜೆಯಲ್ಲಿ ನವವಿವಾಹಿತೆಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ.4 ರಂದು ನಡೆದಿದೆ. ಉರುವಾಲು ಗ್ರಾಮದ ನಿವಾಸಿ ಶೋಭಾ (26ವ.) ನೇಣು ಬಿಗಿದು ಪತಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡವರು. ಕಳೆದ ಒಂದೂವರೆ ತಿಂಗಳ ಹಿಂದೆಯಷ್ಟೆ ಪುತ್ತೂರಿನ ಕುರಿಯದ ಗಡಾಜೆ ರೋಹಿತ್ ರವರೊಂದಿಗೆ ವಿವಾಹ ನಡೆದಿತ್ತು.

ಈಕೆ ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಕುಕ್ಕಾಜೆ ರಾಮ್ಮಣ್ಣ ಗೌಡ ಮತ್ತು ಪುಷ್ಪ ದಂಪತಿ ಪುತ್ರಿ. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿಗೆ ಕಾರಣ ತಿಳಿದುಬಂದಿಲ್ಲ.

Leave a Reply

Your email address will not be published. Required fields are marked *

error: Content is protected !!