ಕರಾವಳಿ

SKSSF ದಾರಂದಕುಕ್ಕು ಶಾಖೆ: ಅಧ್ಯಕ್ಷರಾಗಿ ಡಿ.ಕೆ ಅಶ್ರಫ್ ಹಾಜಿ ಆಯ್ಕೆ



ಪುತ್ತೂರು: SKSSFದಾರಂದಕುಕ್ಕು ಇದರ ವಾರ್ಷಿಕ ಮಹಾಸಭೆಯು ಸಯ್ಯದ್ ಅಪ್ಹಾನ್ ಆಲಿ ತಂಞಳ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.

SKSSF ಸಂಘಟನೆಯಲ್ಲಿ ಸದಸ್ಯರಾಗಿ ಉತ್ತಮ ಕಾರ್ಯಗಳನ್ನು ಸಮಾಜಕ್ಕೆ ನೀಡುವುದು ಒಂದು ಪುಣ್ಯ ಕಾರ್ಯವೆಂದು ಸಭಾದ್ಯಕ್ಷರು ನುಡಿದರು.
ಸಭೆಯಲ್ಲಿ 2024-25 ರ ಸಾಲಿನ ನೂತನ ಕಮಿಟಿಗೆ ಅಧ್ಯಕ್ಷರಾಗಿ ಡಿ.ಕೆ. ಅಶ್ರಫ್ ಹಾಜಿರವರನ್ನು ಆರಿಸಲಾಯಿತು.


ಪ್ರಧಾನ ಕಾರ್ಯದರ್ಶಿ: ಡಿ.ಕೆ.‌ ಹಕೀಂ ಕೋಶಾಧಿಕಾರಿ: ಡಿ.ಕೆ.‌ ಉಮರ್, ಸಂಘಟನಾ ಕಾರ್ಯದರ್ಶಿ ಸಅದ್ ಪೆರ್ನೆ, ಉಪಾಧ್ಯಕ್ಷರು: ಡಿ.ಕೆ.‌ ಹಂಝ ಹಾಜಿ, ಡಿ.ಕೆ. ಅಬ್ಬಾಸ್, ಜೊತೆ ಕಾರ್ಯದರ್ಶಿಗಳು: ಉಮರ್ ಅರ್ಶದಿ, ಬಶೀರ್ ಮುಸ್ಲಿಯಾರ್ ಆಯ್ಕೆಯಾದರು.
ಕಾರ್ಯಕಾರಿ ಸಮಿತಿಗೆ ಉಸ್ಮಾನುಲ್ ಅಫ್ವಾನ್ ಡಿ.ಕೆ.,
ಶರಫುದ್ದೀನ್, ನಬೀಲ್ ಡಿ.ಕೆ., ಅಶ್ಫಾಕ್ ಡಿ.ಕೆ., ನದೀಂ ಡಿ.ಕೆ., ಇಸ್ಮಾಯಿಲ್, ಸೆಯ್ಯದ್, ಹಾದಿಲ್,
ಅಬ್ದುಲ್ ರಹ್ಮಾನ್ ಆಯ್ಕೆಯಾದರು.

ಕ್ಲಸ್ಟರ್ ಕೌನ್ಸಿಲರ್: ಬಶೀರ್ ಮುಸ್ಲಿಯಾರ್,
ಉಮರ್ ಅರ್ಶದಿ, ಅಬ್ಬಾಸ್ ಡಿ.ಕೆ. ರವರನ್ನು ಆರಿಸಲಾಯಿತು.ಬಶೀರ್ ಮುಸ್ಲಿಯಾರ್ ಸ್ವಾಗತಿಸಿದರು.
ಸಹದ್ ಪರ್ನೆ ವಂದಿಸಿದರು.
ವರದಿ: ಅಬ್ದುಲ್ ಖಾದರ್ ಪಾಟ್ರಕೋಡಿ

Leave a Reply

Your email address will not be published. Required fields are marked *

error: Content is protected !!