ಕರಾವಳಿ

ದುಗ್ಗಲಡ್ಕ ಮಾಖಾಂ ಉರೂಸ್ ಸಮಾರಂಭಕ್ಕೆ ಚಾಲನೆ
ಸ್ಪೀಕರ್ ಯು. ಟಿ. ಖಾದರ್ ರವರಿಂದ ಲೈಬ್ರೆರಿ ಉದ್ಘಾಟನೆ



ದುಗ್ಗಲಡ್ಕ ಹಮೀದಾಬಾದ್ ನಲ್ಲಿ ಅಂತ್ಯ ವಿಶ್ರಮ ಗೊಳ್ಳುತ್ತಿರುವ ಅಸ್ಸಯ್ಯದ್ ಫಕ್ರುದ್ದೀನ್ ತಂಗಳ್ (ನ. ಮ) ರವರ ಉರೂಸ್ ಸಮಾರಂಭ ಮತ್ತು ಖುತುಬಿಯ್ಯತ್ 30ನೇ ವಾರ್ಷಿಕದ ಅಂಗವಾಗಿ 3 ದಿನಗಳ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳಿಗೆ ದುಗ್ಗಲಡ್ಕ ದರ್ಗಾಶರೀಫ್ ಬಳಿ ಚಾಲನೆ ನೀಡಲಾಯಿತು.


ಕರ್ನಾಟಕ ಜಂಇಯ್ಯತುಲ್ ಉಲಮ ಮುಷಾವರ ಅಧ್ಯಕ್ಷರಾದ ಅಸ್ಸಯ್ಯದ್ ಝಯ್ನುಲ್ ಆಬಿದೀನ್ ತಂಗಳ್ ಕುಂನ್ನುಗೈ ಅಧ್ಯಕ್ಷತೆ ವಹಿಸಿದ್ದರು.


ಅತಿಥಿಗಳಾಗಿ ಗಾಂಧಿನಗರ ಜುಮ್ಮಾ ಮಸ್ಜಿದ್ ಅಧ್ಯಕ್ಷ ಕೆ. ಎಂ. ಮುಸ್ತಫ, ಎಐಕೆಎಂಸಿಸಿ ಜಿಲ್ಲಾ ಖಜಾಂಚಿ ಇಬ್ರಾಹಿಂ ಹಾಜಿ ಕತ್ತಾರ್ ಮಂಡೆಕೋಲು, ಉದ್ಯಮಿ ರಝಾಕ್ ಹಾಜಿ ರಾಜಧಾನಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಟಿ. ವಿಶ್ವನಾಥ್, ಗ್ರೀನ್ ವ್ಯೂ ನಿರ್ದೇಶಕ ಶಾಫಿ ಕುತ್ತಮೊಟ್ಟೆ, ಕೆ. ಬಿ ಇಬ್ರಾಹಿಂ, ರಿಯಾಜ್ ಕಟ್ಟೆಕ್ಕಾರ್ಸ್, ದರ್ಗಾ ಶರೀಫ್ ಅಧ್ಯಕ್ಷ ಅಬ್ದುಲ್ಲ ಹಾಜಿ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!