ಸುಳ್ಯ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಕೊನೆಗೂ ಬೆಂಚ್ ಅಳವಡಿಕೆಗೆ ಮುಂದಾದ ಇಲಾಖೆ
ಸುಳ್ಯ KSRTC ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಕಬ್ಬಿಣದ ಚೆಯರ್ ಗಳು ಕೆಲವು ತುಂಡಾಗಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸಮಸ್ಯೆ ಉಂಟಾಗಿತ್ತು.
ಈ ಸಮಸ್ಯೆಯ ಬಗ್ಗೆ ‘ನ್ಯೂಸ್ ಬೈಟ್ಸ್’ ಸಚಿತ್ರ ವರದಿ ಮಾಡಿತ್ತು.
![](https://newsbites.in/wp-content/uploads/2023/10/IMG-20231003-WA0027-1024x461.jpg)
ಇದೀಗ ಇದಕ್ಕೆ ಸ್ಪಂದಿಸಿರುವ ಇಲಾಖೆ ಕಬ್ಬಿಣದ ಚೇರುಗಳು ತುಂಡಾಗಿ ಖಾಲಿ ಇರುವ ಸ್ಥಳಗಳಲ್ಲಿ ನೂತನವಾಗಿ ಕಲ್ಲಿನ ಬೆಂಚುಗಳನ್ನು ಅಳವಡಿಸುವ ಕಾರ್ಯದಲ್ಲಿ ತೊಡಗಿದೆ.
ನಾಲ್ಕು ಮಂದಿ ಕುಳಿತುಕೊಳ್ಳಲು ಸಹಾಯಕವಾಗುವ ಸುಮಾರು ನಾಲ್ಕು ಬೆಂಚುಗಳನ್ನು ಅಳವಡಿಸಲಾಗುವುದು ಎಂದು ಸಂಬಂಧಪಟ್ಟ ಅಧಿಕಾರಿ ತಿಳಿಸಿದ್ದಾರೆ.