ಕರಾವಳಿ

ಸುಳ್ಯ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಕೊನೆಗೂ ಬೆಂಚ್ ಅಳವಡಿಕೆಗೆ ಮುಂದಾದ ಇಲಾಖೆ



ಸುಳ್ಯ KSRTC ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಕಬ್ಬಿಣದ ಚೆಯರ್ ಗಳು ಕೆಲವು ತುಂಡಾಗಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸಮಸ್ಯೆ ಉಂಟಾಗಿತ್ತು.
ಈ ಸಮಸ್ಯೆಯ ಬಗ್ಗೆ ‘ನ್ಯೂಸ್ ಬೈಟ್ಸ್’ ಸಚಿತ್ರ ವರದಿ ಮಾಡಿತ್ತು.

ಇದೀಗ ಇದಕ್ಕೆ ಸ್ಪಂದಿಸಿರುವ ಇಲಾಖೆ ಕಬ್ಬಿಣದ ಚೇರುಗಳು ತುಂಡಾಗಿ ಖಾಲಿ ಇರುವ ಸ್ಥಳಗಳಲ್ಲಿ ನೂತನವಾಗಿ ಕಲ್ಲಿನ ಬೆಂಚುಗಳನ್ನು ಅಳವಡಿಸುವ ಕಾರ್ಯದಲ್ಲಿ ತೊಡಗಿದೆ.

ನಾಲ್ಕು ಮಂದಿ ಕುಳಿತುಕೊಳ್ಳಲು ಸಹಾಯಕವಾಗುವ ಸುಮಾರು ನಾಲ್ಕು ಬೆಂಚುಗಳನ್ನು ಅಳವಡಿಸಲಾಗುವುದು ಎಂದು ಸಂಬಂಧಪಟ್ಟ ಅಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!