ರಾಜಕೀಯ

ಕ್ಷಮೆ ಕೇಳಿದರೂ ತಣ್ಣಗಾಗದ ಆಕ್ರೋಶ
ಪುತ್ತೂರು ಬ್ಲಾಕ್ ವಿರುದ್ದ ಹೈಕಮಾಂಡ್‌ಗೆ ದೂರು..?

ಪುತ್ತೂರು: ಪುತ್ತೂರಿನ ಕಾಂಗ್ರೆಸ್ ಕಚೇರಿಯಲ್ಲಿ ಕೋಮುವಾದಿ ಪುರೋಹಿತರೋರ್ವರಿಂದ ಪೂಜೆ ಮಾಡಿಸಿದ ವಿಚಾರ ಗೊಂದಲಕ್ಕೆ ಕಾರಣವಾಗಿ ಆ ಬಳಿಕದ ಬೆಳವಣಿಗೆಯಲ್ಲಿ ಪೂಜೆ ಮಾಡಿದ ಪುರೋಹಿತ ಕೋಮುವಾದಿಯಾಗಿದ್ದು ಅವರಿಂದ ಪೂಜೆ

Read More
ಸಿನೆಮಾ

ಕಾಂತಾರ’ ನೋಡಲು ಸಿನಿ ಪ್ರೇಮಿಗಳ ಕಾತರ’:ಹೌಸ್‌ಫುಲ್ ಪ್ರದರ್ಶನದ ಅಬ್ಬರ

ಪುತ್ತೂರು: ಸದ್ಯ ಕಾಂತಾರ ಸಿನಿಮಾ ಅಬ್ಬರಿಸುತ್ತಿದೆ. ಸಿನಿ ಪ್ರೇಮಿಗಳ ಮನ ಗೆದ್ದಿರುವ ಕಾಂತಾರ ಹೌಸ್‌ಫುಲ್ ಪ್ರದರ್ಶನದೊಂದಿಗೆ ಮುಂದುವರೆದಿದೆ. ಹೌದು…ಕಳೆದ ಒಂದು ವಾರದಿಂದ ಭಾರೀ ಸದ್ದು ಮಾಡುತ್ತಿರುವ ರಿಷಬ್

Read More
ರಾಷ್ಟ್ರೀಯ

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಶಶಿ ತರೂರ್‌ಗೆ ಭಾರೀ ಹಿನ್ನಡೆ

ಚೆನ್ನೈ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ಕೇರಳದ ಸಂಸದ ಶಶಿ ತರೂರ್‌ ಅವರು ತಮಿಳುನಾಡಿನಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದಾರೆ. ಚುನಾವಣೆಯಲ್ಲಿ ಮತದಾನ ಮಾಡಲಿರುವ 700 ಪ್ರತಿನಿಧಿಗಳ ಬೆಂಬಲ

Read More
ಕ್ರೀಡೆ

ಬೆಂಗಳೂರು: ಇಂದಿನಿಂದ ಪ್ರೊ.ಕಬಡ್ಡಿ ಹಬ್ಬ

ಬೆಂಗಳೂರು: ಉದ್ಯಾನನಗರಿಯಲ್ಲಿ ಶುಕ್ರವಾರದಿಂದ ಕಬಡ್ಡಿ ಹಬ್ಬ ಆರಂಭವಾಗಲಿದೆ. ಶ್ರೀಕಂಠೀರವ ಕ್ರೀಡಾಂಗಣದ ಒಳಾಂಗಣದಲ್ಲಿ ವೇದಿಕೆ ಸಜ್ಜಾಗಿದೆ. ಕೋವಿಡ್ ನಿಯಂತ್ರಣದಲ್ಲಿರುವುದರಿಂದ ಈ ಬಾರಿ ಪಂದ್ಯಗಳ ವೀಕ್ಷಣೆಗೆ ಪ್ರೇಕ್ಷಕರಿಗೆ ಪ್ರವೇಶ ನೀಡಲಾಗುತ್ತಿದೆ.

Read More
ಆರೋಗ್ಯರಾಷ್ಟ್ರೀಯ

ಕೆಮ್ಮು, ಶೀತ ಸಿರಪ್‌ಗಳ ಸೇವನೆಯಿಂದ 60ಕ್ಕೂ ಹೆಚ್ಚು ಮಕ್ಕಳು ಸಾವು: ಗಾಂಬಿಯಾದಲ್ಲಿ ಸಿರಪ್ ಹಿಂಪಡೆಯುವ ಅಭಿಯಾನ

ಪಶ್ಚಿಮ ಆಫ್ರಿಕಾದ ಗಾಂಬಿಯಾದಲ್ಲಿ ಕೆಮ್ಮು ಮತ್ತು ಶೀತ ಸಿರಪ್‌ಗಳ ಸೇವನೆಯಿಂದಾಗಿ ಮೂತ್ರಪಿಂಡ ಸಮಸ್ಯೆಯಿಂದ 60ಕ್ಕೂ ಹೆಚ್ಚು ಮಕ್ಕಳು ಸಾವಿಗೀಡಾಗಿದ್ದು, ಈ ಸಿರಪ್‌ಗಳನ್ನು ಹಿಂಪಡೆಯಲು ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಈ

Read More
ಜಿಲ್ಲೆ

ಮಂಗಳೂರಿನಲ್ಲಿ ಸುಹಾನಾ ಟ್ರಾವೆಲ್ಸ್‌ನ ನೂತನ ಕಚೇರಿ ಶುಭಾರಂಭ

ಮಂಗಳೂರು: ಟ್ರಾವೆಲ್ಸ್ ಕ್ಷೇತ್ರದಲ್ಲಿ ಹೆಸರುವಾಸಿಯಾದ ಸುಹಾನಾ ಟ್ರಾವೆಲ್ಸ್‌ನ ನೂತನ ಕಚೇರಿ ಮಂಗಳೂರಿನ ಫಳ್ನೀರ್‌ನಲ್ಲಿರುವ ಸ್ಟರಕ್ ರಸ್ತೆಯ ಸ್ಟರಕ್ ಅವೆನ್ಯೂ ಕಟ್ಟಡದಲ್ಲಿ ಶುಭಾರಂಭಗೊಂಡಿತು. ಮಂಜೇಶ್ವರದ ಸಯ್ಯದ್ ಅಥಾವುಲ್ಲ ತಂಙಳ್

Read More
ಕರಾವಳಿ

ಈಶ್ವರಮಂಗಲದಲ್ಲಿ ಟ್ವೆಂಟಿ-ಟ್ವೆಂಟಿ ಪವರ್ ಸಿಸ್ಟಮ್ಸ್ ಶುಭಾರಂಭ

ಪುತ್ತೂರು: ಇನ್ವರ್ಟರ್, ಬ್ಯಾಟರಿ, ಸೋಲಾರ್, ಸಿಸಿ ಟಿವಿ ಕ್ಯಾಮರಾ ಹಾಗೂ ಗೃಹೋಪಯೋಗಿ ವಸ್ತುಗಳ ಟ್ವೆಂಟಿ-ಟ್ವೆಂಟಿ ಪವರ್ ಸಿಸ್ಟಮ್ ಈಶ್ವರಮಂಗಲ ಕರ್ನಾಟಕ ಕಾಂಪ್ಲೆಕ್ಸ್‌ನಲ್ಲಿ ಅ.೬ರಂದು ಶುಭಾರಂಭಗೊಂಡಿತು. ನೂತನ ಮಳಿಗೆಯನ್ನು ನೆ.ಮುಡ್ನೂರು ಗ್ರಾ.ಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಈಶ್ವರಮಂಗಲಕ್ಕೆ ಹೊಸ ಉದ್ಯಮಗಳು ಬರುತ್ತಿರುವುದು ಅಭಿವೃದ್ಧಿಗೆ ಪೂರಕವಾಗಿದೆ. ಇಲ್ಲಿ ಶುಭಾರಂಭಗೊಂಡ ಟ್ವೆಂಟಿ-ಟ್ವೆಂಟಿ ಶೋರೂಂ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಶುಭ ಹಾರೈಸಿದರು. ಮೇನಾಲ ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್‌ನ ನಿರ್ದೇಶಕ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಶ್ರೀಶ ಕುಮಾರ್ ಮರಕ್ಕಡ, ಇಬ್ರಾಹಿಂ ಹಾಜಿ, ಸಿದ್ದೀಕ್, ಬಾತಿಷಾ ಈಶ್ವರಮಂಗಲ ಮತ್ತಿತರರು ಉಪಸ್ಥಿತರಿದ್ದರು. ಟ್ವೆಂಟಿ-ಟ್ವೆಂಟಿ ಸಂಸ್ಥೆಯ ಮಾಲಕ ಮೊಯ್ದೀನ್ ಅವರು ಸ್ವಾಗತಿಸಿ ಮಾತನಾಡಿ ಕಾಸರಗೋಡು ಜಿಲ್ಲೆಯಲ್ಲಿ ಮತ್ತು ಕರ್ನಾಟಕದ ದ.ಕ ಜಿಲ್ಲೆಯಲ್ಲಿ ೧೯೯೭ರಲ್ಲಿ ಪ್ರಾರಂಭಗೊಂಡ ಯುವರ್ ಚಾಯಿಸ್ ನೂತನ ಸಂಸ್ಥೆಯಾದ ಟ್ವೆಂಟಿ ಟ್ವೆಂಟಿ ಪವರ್ ಸಿಸ್ಟಮ್‌ನ ಎರಡನೇ ಶೋರೂಂ ಇಲ್ಲಿ ಶುಭಾರಂಭಗೊಂಡಿದೆ ಎಂದು ಹೇಳಿ ಗ್ರಾಹಕರ ಸಹಕಾರ ಕೋರಿದರು.

Read More
ರಾಜ್ಯ

ಕಾಂಗ್ರೆಸ್‌ ನಾಯಕರ ವಿರುದ್ಧ ಪತ್ರಿಕೆಗಳಿಗೆ ಜಾಹೀರಾತು ನೀಡಿರುವ ಬಿಜೆಪಿಯ ಕ್ರಮವನ್ನು ಖಂಡಿಸಿದ ಕಾಂಗ್ರೆಸ್‌

ಬೆಂಗಳೂರು: ಕಾಂಗ್ರೆಸ್‌ ನಾಯಕರ ವಿರುದ್ಧ ಪತ್ರಿಕೆಗಳಿಗೆ ಜಾಹೀರಾತು ನೀಡಿರುವ ಬಿಜೆಪಿಯ ಕ್ರಮವನ್ನು ಕಾಂಗ್ರೆಸ್‌ ಖಂಡಿಸಿದೆ.  ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಕೆಪಿಸಿಸಿ, ‘ತನ್ನ ಹತಾಶೆ, ಸೋಲು, ನೋವುಗಳನ್ನು

Read More
ಕರಾವಳಿ

ನಮ್ಮ ಗ್ರಾಮವನ್ನು ಪುತ್ತೂರು ತಾಲೂಕಿಗೆ ಸೇರಿಸಿ: ಎರಡು ಗ್ರಾಮಸ್ಥರಿಂದ ಎ.ಸಿಗೆ ಮನವಿ

ಪುತ್ತೂರು: ಪಾಲ್ತಾಡಿ ಮತ್ತು ಪುಣ್ಚಪ್ಪಾಡಿ ಗ್ರಾಮವನ್ನು ಪುತ್ತೂರು ತಾಲೂಕಿನಲ್ಲಿಯೇ ಉಳಿಸಿಕೊಳ್ಳುವಂತೆ ಆಗ್ರಹಿಸಿ ಸಹಾಯಕ ಆಯುಕ್ತರಿಗೆ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಗಿದೆ. ಪುತ್ತೂರು ತಾಲೂಕು ವಿಭಾಗವಾಗಿ ಕಡಬ ತಾಲೂಕು ಪ್ರತ್ಯೇಕ ರಚನೆ ಆದಾಗ ಕಡಬಕ್ಕೆ ದೂರದಲ್ಲಿರುವ ಮತ್ತು ಪುತ್ತೂರಿಗೆ ಹತ್ತಿರ ಇರುವ ಪಾಲ್ತಾಡಿ ಮತ್ತು ಪುಣ್ಚಪ್ಪಾಡಿ ಗ್ರಾಮಗಳನ್ನು ಕಡಬಕ್ಕೆ ಸೇರ್ಪಡೆ ಮಾಡಲಾಗಿದ್ದು ಇದನ್ನು ಕೈಬಿಟ್ಟು ಪುತ್ತೂರು ತಾಲೂಕಿನಲ್ಲೇ ಈ ಗ್ರಾಮಗಳನ್ನು ಉಳಿಸಬೇಕು ಎಂದು ಒತ್ತಾಯಿಸಿ ಪಾಲ್ತಾಡಿ ಗ್ರಾಮ ಪುತ್ತೂರು ತಾಲೂಕು ಸೇರ್ಪಡೆ ಹೋರಾಟ ಸಮಿತಿಯಿಂದ ಸಹಾಯಕ ಕಮೀಷನರ್‌ಗೆ ಮನವಿ ಮಾಡಲಾಗಿದ್ದು ಪುತ್ತೂರಿಗೆ 18 ಕಿ.ಮೀ. ಕಡಬಕ್ಕೆ 60 ಕಿ.ಮೀ. ದೂರ ಇರುವ ಅಂತರವನ್ನು ಗಮನಿಸಿ ಬಡವರಿಗೆ ದುಂದು ವೆಚ್ಚ ಮತ್ತು ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸಲು ಪಾಲ್ತಾಡಿ ಮತ್ತು ಪುಣ್ಚಪ್ಪಾಡಿ ಗ್ರಾಮವನ್ನು ಪುತ್ತೂರು ತಾಲೂಕಿನಲ್ಲೇ ಉಳಿಸುವಂತೆ ಒತ್ತಾಯಿಸಲಾಗಿದೆ.  ಪಾಲ್ತಾಡಿ ಗ್ರಾಮ ಪುತ್ತೂರು ತಾಲೂಕು ಸೇರ್ಪಡೆ ಹೋರಾಟ ಸಮಿತಿ ಅಧ್ಯಕ್ಷ ವೆಂಕಪ್ಪ ಗೌಡ, ಕರ್ನಾಟಕ ಋಣಮುಕ್ತ ಹೋರಾಟ ಸಮಿತಿ ಅಧ್ಯಕ್ಷರಾದ ನ್ಯಾಯವಾದಿ ಬಿ.ಎಂ.ಭಟ್, ಹೋರಾಟ ಸಮಿತಿ ಕಾರ್ಯದರ್ಶಿ ಯಶೋದಾ ಹಾಗು ಸಮಿತಿ ಮುಖಂಡರುಗಳಾದ ಪುಷ್ಪ ರೇಖಲತಾ, ಬಾಬು, ಉದಯ, ದಲಿತ ಹಕ್ಕು ಹೋರಾಟ ಸಮಿತಿ ಮುಖಂಡೆ ಈಶ್ವರಿ ಮನವಿ ನೀಡುವ ಸಂದರ್ಭ ಉಪಸ್ಥಿತರಿದ್ದರು

Read More
error: Content is protected !!