ರಾಷ್ಟ್ರೀಯ

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಶಶಿ ತರೂರ್‌ಗೆ ಭಾರೀ ಹಿನ್ನಡೆ



ಚೆನ್ನೈ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ಕೇರಳದ ಸಂಸದ ಶಶಿ ತರೂರ್‌ ಅವರು ತಮಿಳುನಾಡಿನಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದಾರೆ.


ಚುನಾವಣೆಯಲ್ಲಿ ಮತದಾನ ಮಾಡಲಿರುವ 700 ಪ್ರತಿನಿಧಿಗಳ ಬೆಂಬಲ ಕೋರಲು ಚೆನ್ನೈನಲ್ಲಿ ಸಮಾವೇಶ ನಡೆಸಿದ್ದರು. ಆದರೆ, ಪಕ್ಷದ ರಾಜ್ಯ ಪ್ರಧಾನ ಕಚೇರಿ ಸತ್ಯಮೂರ್ತಿ ಭವನದಲ್ಲಿ ನಡೆದ ಸಮಾರಂಭಕ್ಕೆ 12 ಪ್ರತಿನಿಧಿಗಳಷ್ಟೇ ಭಾಗವಹಿಸಿದ್ದರು ಎನ್ನಲಾಗಿದೆ.


ತರೂರ್‌ ಅವರ ಸಭೆಯಲ್ಲಿ ಭಾಗವಹಿಸುವುದು ಗಾಂಧಿ ಕುಟುಂಬದ ಅನುಮೋದನೆ ಪಡೆದಿರುವ ‘ಅಧಿಕೃತ’ ಅಭ್ಯರ್ಥಿಯನ್ನು ವಿರೋಧಿಸಿದಂತಾಗಲಿದೆ ಎಂದು ಸಭೆಯಿಂದ ಅಂತರ ಕಾಯ್ದುಕೊಂಡಿರುವುದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!