ಕರಾವಳಿ

ಖಿದ್ಮಾ ಕಾವ್ಯ ಪ್ರಶಸ್ತಿಗೆ ಶಿಕ್ಷಕಿ ತನ್ಸೀರಾ ಆತೂರು ಆಯ್ಕೆ

ಪುತ್ತೂರು: ಖಿದ್ಮಾ ಫೌಂಡೇಶನ್ ಕರ್ನಾಟಕ ವತಿಯಿಂದ ಧಾರವಾಡದ ರಂಗಾಯಣದಲ್ಲಿ ಮಾ.5ರಂದು ನಡೆಯಲಿರುವ ಖಿದ್ಮಾ ಕವಿ ಕಾವ್ಯ ಸಂಗಮದಲ್ಲಿ ಉಪ್ಪಿನಂಗಡಿ ಇಳಂತಿಲ ಜ್ಞಾನ ಭಾರತಿ ಪ್ರೌಢಶಾಲೆ ಶಿಕ್ಷಕಿ ತನ್ಸೀರಾ ಆತೂರು ಅವರು ಖಿದ್ಮಾ ಕಾವ್ಯ ಪ್ರಶಸ್ತಿ ಸ್ವೀಕರಿಸಲಿದ್ದಾರೆ.


ಇವರು ಹಂಝ ಕೊಯಿಲ ಮತ್ತು ರುಖಿಯಾ ದಂಪತಿ ಪುತ್ರಿ.


ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ತನ್ಸೀರಾ ಅವರಿಗೆ ಖಿದ್ಮಾ ಕಾವ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಖಿದ್ಮಾ ರಾಜ್ಯ ಸಂಚಾಲಕ ಆಮಿರ್ ಬನ್ನೂರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!