ಕರಾವಳಿ

ಬೆಳಂದೂರು ಪಲ್ಲತ್ತಾರು ಜಮಾಅತ್ ಜಿಸಿಸಿ ಗಲ್ಫ್ ಸಮಿತಿಅಧ್ಯಕ್ಷರಾಗಿ ರಫೀಕ್ ಮಕ್ಕಾ, ಕಾರ್ಯದರ್ಶಿಯಾಗಿ  ಮಜೀದ್ ರಿಯಾದ್



ಪುತ್ತೂರು: ಖಿದ್ಮತುಲ್ ಇಸ್ಲಾಂ ಗಲ್ಫ್ ಸಮಿತಿ, ಜಿಸಿಸಿ ಇದರ ವಾರ್ಷಿಕ ಮಹಾಸಭೆ ಅಶ್ರಫ್ ಬೆಳಂದೂರು (ಖತ್ತರ್)      ಅವರ ಅಧ್ಯಕ್ಷತೆಯಲ್ಲಿ ನಡೆಯಿತು

ರಫೀಕ್ ಮಜೀದ್

ಹನೀಫ್ ಹಿಮಮಿ ದಮ್ಮಾಮ್ ದುವಾ ಮಾಡಿದರು. ಅಬ್ದುಲ್ ಲತೀಫ್ ಮಿಸ್ಬಾಹಿ ಬೆಳಂದೂರು ಕಿರಾಅತ್ ಪಾರಾಯಣ ನಡೆಸಿದರು. ಅಶ್ರಫ್ ಅಮ್ಜದಿ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಅಶ್ರಫ್ ಖತ್ತಾರ್ ಅವರು ಸಮಿತಿ ಕಾರ್ಯಚಟುವಟಿಕೆಗಳ ಮತ್ತು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು. ನಂತರ ೨೦೨೨-೨೩ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ರಫೀಕ್ ಮಕ್ಕಾ, ಉಪಾಧ್ಯಕ್ಷರಾಗಿ ಯಾಕೂಬ್ ಅಬುಧಾಬಿ, ಪ್ರಧಾನ ಕಾರ್ಯದರ್ಶಿಯಾಗಿ ಮಜೀದ್ ರಿಯಾದ್, ಜೊತೆ ಕಾರ್ಯದರ್ಶಿಯಾಗಿ ಶಾದುಳಿ ಶಾರ್ಜಾ, ಕೋಶಾಧಿಕಾರಿಯಾಗಿ ಅಶ್ರಫ್ ಅಮ್ಜದಿ ಅಬುಧಾಬಿ ಅವರನ್ನು ಆಯ್ಕೆ ಮಾಡಲಾಯಿತು. 

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಯಾಕೂಬ್ ತಬುಕ್, ಅಶ್ರಫ್ ಖತ್ತಾರ್ ಮಿಸ್ಬಾಹಿ ಬೆಳಂದೂರು, ರಿಯಾದ್, ಹನೀಫ್ ಹಿಮಮಿ ದಮ್ಮಾಮ್, ಇಕ್ಬಾಲ್ ಬನಾರಿ ರಿಯಾದ್, ಯಾಸೀರ್ ದೇವಸ್ಯ ಅಬುಧಾಬಿ, ಹನೀಫ್ ಕಾನಾಜೆ ದುಬೈ, ರಫೀಕ್ ಪಾರೆ ದುಬೈ ಮೊದಲಾದವರನ್ನು ಆಯ್ಕೆ ಮಾಡಲಾಯಿತು.

ಸಮಿತಿಯ ಜೊತೆ ಕಾರ್ಯದರ್ಶಿ ಮಜೀದ್ ರಿಯಾದ್ ಸ್ವಾಗತಿಸಿದರು. ಗಲ್ಫ್ ಸಮಿತಿಯ ಜೊತೆ ಕಾರ್ಯದರ್ಶಿ ಶಾದುಳಿ ಎರಿಮಾರ್ ಶಾರ್ಜಾ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!