ಕರಾವಳಿ

ಪೆರ್ನೆಯಲ್ಲಿ ವಿದ್ಯುತ್ ಆಘಾತದಿಂದ ಕಾರ್ಮಿಕ ಮೃತ್ಯು: ಕುಟುಂಬಕ್ಕೆ 3 ಲಕ್ಷ ರೂ ಪರಿಹಾರ ಮಂಜೂರು-ಶಾಸಕ ಅಶೋಕ್ ರೈ



ಪುತ್ತೂರು: ತೋಟದಲ್ಲಿ ಕೃಷಿ ಚಟುವಟಿಕೆ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಅವಘಡದಿಂದ ಮೃತಪಟ್ಟ ಪೆರ್ನೆ ಗ್ರಾಮದ ಚೀಂಕ್ರಗುರಿ ನಿವಾಸಿ ಚಂದಪ್ಪ ಪೂಜಾರಿ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮೂರು ಲಕ್ಷ ಮಂಜೂರುಗೊಂಡಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.



ಜುಲೈ 8ರಂದು ಚಂದಪ್ಪ ಪೂಜಾರಿಯವರು ತನ್ನ ಕೃಷಿ ಜಾಗದಲ್ಲಿ ಮರದ ಗೆಲ್ಲು ಕಡಿಯುವ ವೇಳೆ ವಿದ್ಯುತ್ ತಂತಿಗೆ ಮರದ ಗೆಲ್ಲು ತಾಗಿ ಚಂದಪ್ಪರವರು ವಿದ್ಯುತ್ ಅವಘಡದಿಂದ ಸ್ಥಳದಲ್ಲೇ ಮೃತಪಟ್ಟಿದ್ದರು. ಇವರ ಕುಟುಂಬವರು ಆರ್ಥಿಕವಾಗಿ ತೀರಾ ಬಡತನದಲ್ಲಿದ್ದು ಮೃತರ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ಶಾಸಕರು ಮುಖ್ಯಮಂತ್ರಿ ಗೆ ಮನವಿ ಸಲ್ಲಿಸಿದ್ದರು. ಶಾಸಕರ ಶಿಫಾರಸ್ಸಿನಂತೆ ಮೂರು ಲಕ್ಷ ಪರಿಹಾರ ಧನ ಮಂಜೂರಾಗಿದ್ದು ಕೆಲವೇ ದಿನಗಳಲ್ಲಿ ಮೃತರ ಕುಟುಂಬಸ್ಥರ ಖಾತೆಗೆ ಜಮೆಯಾಗಲಿದೆ.

 

Leave a Reply

Your email address will not be published. Required fields are marked *

error: Content is protected !!