ಕರಾವಳಿ

ಕಲ್ಲುಗುಂಡಿ ರಸ್ತೆ ಹೊಂ ದುರಸ್ತಿಪಡಿಸಿ ಮಾದರಿಯಾದ ವ್ಯಾಪಾರಿ



ಸುಳ್ಯ: ಕಲ್ಲುಗುಂಡಿ ಪೇಟೆಯ ಕೂಲಿಶೆಡ್ದ್ ಮಾಣಿ ಮೈಸೂರು ಹೆದ್ದಾರಿಯಲ್ಲಿ ರಸ್ತೆಯ ನಡು ಭಾಗದಲ್ಲಿ ಬೃಹತ್ ಹೊಂಡ ನಿರ್ಮಾಣವಾಗಿದ್ದು ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿತ್ತು.


ಕೆಲವು ದ್ವಿಚಕ್ರ ವಾಹನ ಸವಾರರು ವೇಗದಿಂದ ಬರುವಾಗ ಈ ಗುಂಡಿಯನ್ನು ಕಾಣದೆ ವಾಹನದ ನಿಯಂತ್ರಣ ತಪ್ಪಿ ಅಪಘಾತಗಳು ಉಂಟಾಗುವ ಸಂಭವ ನಿರ್ಮಾಣವಾಗಿತ್ತು.

ಇದನ್ನೆಲ್ಲಾ ಕಂಡ ಸ್ಥಳೀಯ ವ್ಯಾಪಾರಿ ಭಾರತ್ ಪೈಂಟ್ ಅಂಗಡಿ ಮಾಲಕ ಕಿಫಾಯತುಲ್ಲಾ ಎಂಬುವವರು ಸ್ಪಂದಿಸಿ ಹೊಂಡ ನಿರ್ಮಾಣವಾದ ಜಾಗಕ್ಕೆ ಜಲ್ಲಿ ಸಿಮೆಂಟ್ ಹಾಕಿ ದುರಸ್ತಿಪಡಿಸಿ ಸಹಕರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!