ಕರಾವಳಿ

ಸುಳ್ಯ: ಕಲ್ಲಪಳ್ಳಿಪಾಣತ್ತೂರು ಸಂಪರ್ಕದ ಬಾಟೋಳಿಯಲ್ಲಿ ಧರೆ ಕುಸಿತ– ವಾಹನ ಸಂಚಾರಕ್ಕೆ ಅಡಚಣೆ



ಸುಳ್ಯ:ಕಲ್ಲಪಳ್ಳಿ ಪಾಣತ್ತೂರು ಅಂತರ್ ರಾಜ್ಯ ಸಂಪರ್ಕದ ರಸ್ತೆಯ ಬಾಟೋಳಿ ಎಂಬಲ್ಲಿ ಬೃಹತ್ ಧರೆ ಕುಸಿತ ಉಂಟಾಗಿ ರಸ್ತೆ ಮೇಲೆ ಮಣ್ಣು ಹಾಗೂ ಮರ ಬಿದ್ದುದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ಬಾಟೋಳಿ ಗಡಿ ಪ್ರದೇಶದಿಂದ ಸುಮಾರು 100 ಮೀಟರ್ ಮುಂದೆ ಘಟನೆ ಸಂಭವಿಸಿದ್ದು ಪಾಣತ್ತೂರು ರಸ್ತೆ ಸಂಚಾರ ಬಂದ್ ಆಗಿದೆ. ಈ ಭಾಗದಲ್ಲಿ ಹಿಂದೆಯೂ ಧರೆ ಕುಸಿತಗೊಂಡಿತ್ತು. ಲಘು ವಾಹನಗಳಿಗೆ ಬಡ್ಡಡ್ಕದಿಂದ ರಂಗತಮಲೆ ಪರ್ಯಾಯ ಮಾರ್ಗವಾಗಿ ಸಂಚರಿಸಬಹುದು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!