ಸುಳ್ಯ: ಕಲ್ಲಪಳ್ಳಿ–ಪಾಣತ್ತೂರು ಸಂಪರ್ಕದ ಬಾಟೋಳಿಯಲ್ಲಿ ಧರೆ ಕುಸಿತ– ವಾಹನ ಸಂಚಾರಕ್ಕೆ ಅಡಚಣೆ
ಸುಳ್ಯ:ಕಲ್ಲಪಳ್ಳಿ ಪಾಣತ್ತೂರು ಅಂತರ್ ರಾಜ್ಯ ಸಂಪರ್ಕದ ರಸ್ತೆಯ ಬಾಟೋಳಿ ಎಂಬಲ್ಲಿ ಬೃಹತ್ ಧರೆ ಕುಸಿತ ಉಂಟಾಗಿ ರಸ್ತೆ ಮೇಲೆ ಮಣ್ಣು ಹಾಗೂ ಮರ ಬಿದ್ದುದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
![](http://newsbites.in/wp-content/uploads/2023/07/IMG_20230719_131116.jpg)
ಬಾಟೋಳಿ ಗಡಿ ಪ್ರದೇಶದಿಂದ ಸುಮಾರು 100 ಮೀಟರ್ ಮುಂದೆ ಘಟನೆ ಸಂಭವಿಸಿದ್ದು ಪಾಣತ್ತೂರು ರಸ್ತೆ ಸಂಚಾರ ಬಂದ್ ಆಗಿದೆ. ಈ ಭಾಗದಲ್ಲಿ ಹಿಂದೆಯೂ ಧರೆ ಕುಸಿತಗೊಂಡಿತ್ತು. ಲಘು ವಾಹನಗಳಿಗೆ ಬಡ್ಡಡ್ಕದಿಂದ ರಂಗತಮಲೆ ಪರ್ಯಾಯ ಮಾರ್ಗವಾಗಿ ಸಂಚರಿಸಬಹುದು ಎಂದು ತಿಳಿದು ಬಂದಿದೆ.